Friday 25 October 2013

ಸಂದರ್ಶನ ಮಾಡುವುದು ಒಂದು ಕುಶಲ ಕಲೆ . - Interviewing is an Art and Craft .


ಹಲವಾರು ದಿನಗಳಿಂದ ಕಾರಣಾಂತರಗಳಿಂದ ವಿಜ್ಞಾನ ಸಂವಹನೆಗಾಗಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯವರು ನೀಡುವ ರಾಷ್ಟ್ರ ಪ್ರಶಸ್ತಿ ಪಡೆದಿರುವ ಈ ಮೂವರನ್ನು(ಒಟ್ಟು ಎಂಟು ಜನ ಇದ್ದಾರೆ )  ಸಂದರ್ಶಿಸುವ ಅಫೀಷಿಯಲ್ ಕೆಲಸ ಬಾಕಿ ಉಳಿದುಬಿಟ್ಟಿತ್ತು . ಮೂವರ ಅಪಾಯಿಂಟ್ ಮೆಂಟ್ ಅನ್ನು ಸಿನ್ಕ್ರೋನೈಸ್ ಮಾಡಿ ಒಂದೇ ದಿನದಲ್ಲಿ ಹ್ಯಾಟ್ರಿಕ್ ಸಾಧಿಸಿದ್ದು ಒಂದು ಸಾಧನೆಯೇ ಸೈ .
 ಈ ಮೂವರು ಹಿರಿಯರ ಮತ್ತು ಅವರ ಡಾಕ್ಟರುಗಳ ಅಪಾಯಿಂಟ್ಮೆಂಟ್ ಅನ್ನು ಅನುಸರಿಸಿ ನಿನ್ನೆಗೆ ಸಮಯ ಹೊಂದಿಕೆಯಾಯಿತು (25-10-2003).  ಭಟ್ಟರು (AKB) 24-10-2013 ರರ ಸಂಜೆ ಫೋನುಮಾಡಿ ಕಮಲಾ ಶನಿವಾರ  (26-10-2013) ನನಗೆ ಸ್ವಲ್ಪ ತೊಂದರೆಯಿದೆ ಶುಕ್ರವಾರವೇ  ಬಂದುಬಿಡು ಉಳಿದ ಇಬ್ಬರನ್ನು ಒಪ್ಪಿಸುವುದು ನನ್ನ ಕೆಲಸ ಎಂದಾಗ , ನನ್ನ ಕೆಲಸ ಸುಲಭವಾಯಿತು ಎಂದುಕೊಂಡು ಮನೆಕಡೆಗೆ ಎಲ್ಲ ವ್ಯವಸ್ಥೆಮಾಡಿ (ದೋಸೆಹಿಟ್ಟು,ಪಲ್ಯ , ಸಾರು ಇತ್ಯಾದಿ ) ಮೈಸೂರಿನ ಬಸ್ಸು ಹತ್ತಿ ಶುಕ್ರವಾರ  ಅಲ್ಲಿದ್ದೆ.

ರಾಯರು, ಭಟ್ಟರು ಮತ್ತು ಶ್ರೀಮತಿ ಇವರುಗಳು ಬರೆದ ವಿಜ್ಞಾನ ಸಾಹಿತ್ಯ ಓದುತ್ತಾ ಬೆಳೆದಿದ್ದ ನನಗೆ ಇದೊಂದು ಸುವರ್ಣ ಅವಕಾಶವಾಗಿತ್ತು .
ಜೆ ಎಲ್ ಲಕ್ಷ್ಮಣ ರಾವ್
ಕನ್ನಡದಲ್ಲಿ ವಿಜ್ಞಾನ ಸಂವಹನೆ ಯಾವ ಸನ್ನಿವೇಶದಲ್ಲಿ ಪ್ರಾರಂಭವಾಯಿತು ? ಆರಂಭದ ದಿನಗಳ ಕಷ್ಟನಷ್ಟಗಳು ಏನು ? ಕನ್ನಡದಲ್ಲಿ ವಿಜ್ಞಾನ ಪ್ರಸಾರದ   ಸಾಂಸ್ಥಿಕರಣವಾದ ಬಗೆ ಇತ್ಯಾದಿ ಇತ್ಯಾದಿ ಕೇಳುತ್ತಾ ಹೋದಂತೆ ನನಗೆ ಬೇಕು ಬೇಕಾದ ಅನೇಕ ವಸ್ತುನಿಷ್ಠ ವಿಷಯಗಳು ಸ್ಪಷ್ಟವಾಗಿ ಮೂಲ ಪುರುಷರಿಂದ ತಿಳಿಯುತ್ತಾ ಹೋಯಿತು . 
ಆದರೆ ಸಂದರ್ಶನ ಮಾಡುವಾಗ ಎಚ್ಚರಿಕೆಯಿಂದ ಚರ್ಚೆಯನ್ನು ಟ್ರಾಕ್ ಮೇಲೆ ಇಡದಿದ್ದರೆ ಸಂದರ್ಶಿಸುವವರಿಗೆ  ಅಷ್ಟರಮಟ್ಟಿಗೆ ಲಾಸ್ ಎಂದೇ ಹೇಳಬಹುದು . ನನ್ನ ಉಪನ್ಯಾಸಕ ವೃತ್ತಿ , ನಿರೂಪಕಿಯ ಪ್ರವೃತ್ತಿ , ಬರವಣಿಗೆಯ ಒಳತುಡಿತ ಇವೆಲ್ಲವೂ ಸೇರಿ ನಾನು ನಡೆಸಿದ ಮೊಟ್ಟ ಮೊದಲ "ಸರಣಿ ಸಂದರ್ಶನ"ದಲ್ಲಿ ಪರವಾಗಿಲ್ಲ ಎನಿಸಬಹುದಾಷ್ಟು ವಿಷಯ ಸಂಗ್ರಹಣೆ  ಮತ್ತು ತೃಪ್ತಿ ಪಡೆದಿದ್ದೇನೆ . 
ಶ್ರೀಮತಿ ಹರಿಪ್ರಸಾದ್


ಅಡ್ಯನಡ್ಕ ಕೃಷ್ಣಭಟ್
ಇನ್ನು ಈ ಮೂವರ ವಿಷಯದಲ್ಲೂ ಸಮಾನವಾಗಿ ಕಂಡ ಅಂಶವೆಂದರೆ ಜೀವನದಲ್ಲಿ ತಮಗೆದುರಾದ ಅನೇಕ ವೈಯುಕ್ತಿಕ ಏರುಪೇರುಗಳ ನಡುವೆಯೂ, ಕನ್ನಡದ ಕಂದಮ್ಮಗಳಿಗೆ , ಕನ್ನಡಿಗರಿಗೆ ವಿಜ್ಞಾನ ಸಾಹಿತ್ಯವನ್ನು ಒದಗಿಸಬೇಕೆಂಬ ಇವರುಗಳ ಕಳಕಳಿ ಮತ್ತು ಬದ್ದತೆ ಅನನ್ಯವಾದದ್ದು . ಇಂತಹ ಕೆಲಸಕ್ಕೆ ರಾಷ್ಟ್ರಪ್ರಶಸ್ತಿ ನೀಡಿರುವುದು ನಿಜವಾದರೂ , ಅವರು ಇದನ್ನೆಂದೂ ಕನಸಿನಲ್ಲಿಯೂ ಬಯಸಿ ಕೆಲಸ ಮಾಡಿದವರಲ್ಲ ಎಂಬುದೂ ಸಹ ಅಷ್ಟೇ ನಿಜವಾದುದು . 
ಹಲವುಬಾರಿ ಕ್ಯಾಮೆರಾ ಮುಂದೆ ಸ್ಟೈಲ್ ಆಗಿ ಕುಳಿತು ಸಂದರ್ಶನ ನೀಡಿದ್ದ ನನಗೆ ,ಕೊನೆಗೆ ಅನ್ನಿಸಿದ್ದು ಸಂದರ್ಶಿಸುವುದು ಒಂದು ಕುಶಲಕಲೆ ಎಂದು .

Sunday 1 September 2013

ಶಿಕ್ಷಕರ ದಿನಾಚರಣೆಯಂದು ನಿಮಗಿದೋ ನಮಸ್ಕಾರ ಮೇಷ್ಟ್ರೇ ........


ಪಾಠ ಹೇಳಿಕೊಟ್ಟ ಗುರುಗಳನ್ನು ನೆನೆಯಲು ಪ್ರತಿದಿನವೂ ಶಿಕ್ಷಕರ ದಿನಾಚರಣೆಯೇ ಎಂದರೆ ಅತಿಶಯೋಕ್ತಿಯೇನಿಲ್ಲ ಬಿಡಿ .  ಆದರೆ ಸೆಪ್ಟೆಂಬರ್   ಐದರಂದು   ಅದಕ್ಕಾಗೆ ಮೀಸಲಿರುವುದರಿಂದ ಎಂದೋ ಬರೆಯಬೇಕಾಗಿದ್ದ ಈ ವಿಷಯವನ್ನು ಇಂದು ಬರೆಯುತ್ತಿದ್ದೇನೆ ಅಷ್ಟೇ .
ನಮ್ಮ ಕಲಿಕೆಯ ವಿವಿದ ಹಂತಗಳಲ್ಲಿ ಹಲವಾರು ಗುರುಗಳು ನಮಗೆ ನೆರವಾಗಿರುತ್ತಾರೆ ಅವರೆಲ್ಲರಿಗೂ ಮೊದಲಿಗೆ ಕೃತಜ್ಞತೆಗಳನ್ನು ಅರ್ಪಿಸಿಬಿಡುತ್ತೇನೆ . ಅನಂತರ ಇಬ್ಬರು ವಿಶೇಷವಾದ ಗುರುಗಳಬಗ್ಗೆ ನಿಮಗೆ ತಿಳಿಸುತ್ತೇನೆ .
ಡಾ . ಸಿ.  ಅರ್.   ರಾಮಸ್ವಾಮಿ  ಮತ್ತು ಡಾ .  ಎಂ.  ಜಿ.   ನರಸಿಂಹನ್ ಅವರೇ ಈ ಇಬ್ಬರು ಗುರುಗಳು . 

PhD ಮಹಾಪ್ರಬಂದವನ್ನು ಸಮರ್ಥಿಸಿಕೊಂಡ ದಿನ (2000,ಸೆಪ್ಟೆಂಬರ್ ), ನನ್ನ ಕುಟುಂಬ, ಗುರುಗಳಾದ  ರಾಮಸ್ವಾಮಿ ಮತ್ತು ನರಸಿಂಹನ್ ಅವರೊಂದಿಗೆ ,ಹಂಪಿ ವಿ ವಿ ಯಲ್ಲಿ . ಅಪ್ಪನ ಹೆಗಲಲ್ಲಿರುವ ಪಲ್ಲವಿ ನಾಲ್ಕು ತಿಂಗಳ ಮಗು .

ರಾಮಸ್ವಾಮಿ ಬೆಂಗಳೂರು ವಿಶ್ವವಿದ್ಯಾಲದಲ್ಲಿ ನ್ಯೂಕ್ಲಿಯಾರ್ ಪಿಸಿಕ್ಸ್ ನ ಪ್ರೊಫೆಸರ್ ಆಗಿದ್ದರೆ  ನರಸಿಂಹನ್ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿರುವವರು . 

1996 ರ ಒಂದುದಿನ .
**********************
1996 ರ ಒಂದು ದಿನ ಕೈಯ್ಯಲ್ಲಿ ಅರ್ಜಿಯೊಂದನ್ನು ಹಿಡಿದ ನಾನು ಬೆಂಗಳೂರು ವಿಶ್ವವಿದ್ಯಾಲಯದ ರಾಮಸ್ವಾಮಿಯವರ ಕೊಠಡಿಗೆ ತೆರಳಿ "ಮೇಷ್ಟ್ರೇ ಇದಕ್ಕೆ ಸೈನು ಮಾಡಿ" ಎಂದೆ . ಅವಕ್ಕಾದ ಮೇಷ್ಟ್ರು "ಏನದು "ಎಂದರು "PhD ಗೆ ಅಪ್ಲೈ ಮಾಡಲು ಅರ್ಜಿ" ಎಂದೆ ." ಯಾವ ವಿಷಯ ,ಯಾವ ವಿಶ್ವವಿದ್ಯಾಲಯ ,ಏನುಕತೆ" ಎಂದು ವಿಚಾರಿಸಿದರು .
"ಹಂಪಿ ಕನ್ನಡ ವಿಶ್ವವಿದ್ಯಾಲಯ , ಭೌತಶಾಸ್ತ್ರ ಮತ್ತು ಇತಿಹಾಸ ಸಮ್ಮಿಲನಗೊಂಡ ವಿಷಯ" ಎಂದೆ . "ನನಗಿದು ಹೊಸದು ಅಷ್ಟಾಗಿ ತಿಳಿಯದು" ಎಂದು ಪ್ರಾಂಜಲ ಮನಸ್ಸಿನಿಂದ ಹೇಳಿದರು . ಆಗ ನಾನು "ಮೇಷ್ಟ್ರೇ ನನಗೂ ಅಷ್ಟಾಗಿ ತಿಳಿಯದು ಅಧ್ಯಯನ ಮಾಡುತ್ತಾ ಸಾಗೋಣ , ಮುಂದಿನದನ್ನು ನೋಡೋಣ" ಎಂದೆ . "ಅಕಸ್ಮಾತ್ ನಿನ್ನ ಕೆಲಸಕ್ಕೆ PhD ಬರದಿದ್ದರೆ" ಎಂದರು ," ಪರವಾಗಿಲ್ಲ"  ಎಂಬ ಉತ್ತರ ಕೊಟ್ಟ ಮೇಲೆ ಅರ್ಜಿಗೆ ಸಹಿ ಮಾಡಿದರು . ವಿಶ್ವವಿದ್ಯಾಲಯಕ್ಕೆ ಅಪ್ಲೈ ಮಾಡಿ ನನ್ನ ಹೆಸರನ್ನು ನೊಂದಾಯಿಸಿ ಕೊಂಡೆ ( ಈ ರಾಮಾಯಣಕ್ಕೆ ಮುಂಚೆ ಪ್ರವೇಶ ಪರೀಕ್ಷೆ ಬರೆದು ಪಾಸು ಮಾಡಿದ್ದೆ ). 


ಹಿನ್ನಲೆ
***********
ನಾನು MSc ಪಾಸು (ಫಸ್ಟ್ ಕ್ಲಾಸು )ಮಾಡಿದ ತರುವಾಯದಲ್ಲಿ ಆಗಾಗ ಸಿಕ್ಕಾಗಲೆಲ್ಲ ರಾಮಸ್ವಾಮಿ ಮೇಷ್ಟ್ರು "ಕಮಲಾ ನೀನು ಇನ್ನೂ ಏಕೆ PhD ಮಾಡಿಲ್ಲ ಬೇಗನೆ ಮಾಡು" ಎಂದು ಹೇಳುತ್ತಿದ್ದರು . ಆಗೆಲ್ಲಾ ನಾನು "ಮೇಷ್ಟ್ರೇ ನೀವು ಗೈಡ್ ಮಾಡುವುದಾದರೆ ನಾನು ಮಾಡುತ್ತೇನೆ" ಎನ್ನುತ್ತಿದ್ದೆ . ಆದರೆ ಮದುವೆ ಮಕ್ಕಳು ಸಂ-ಸಾರ ಎಂದೆಲ್ಲಾ ಸಿಕ್ಕಿಹಾಕಿಕೊಂಡಮೇಲೆ (ಗೊತ್ತಿದ್ದೂ ಗೊತ್ತಿದ್ದೂ ಎಲ್ಲರೂ ಮಾಡುವ ತಪ್ಪು /ಸರಿ ?)  ಅಧ್ಯಯನಕ್ಕೆ ಪುರುಸೊತ್ತೇ ಸಿಕ್ಕಿರಲಿಲ್ಲ . ಅದೇನೋ ಗೊತ್ತಿಲ್ಲ ಇದ್ದಕ್ಕಿದ್ದಂತೆ ಅಧ್ಯಯನದ ಬಗ್ಗೆ ತೀವ್ರ ಆಸಕ್ತಿ ವಹಿಸಿ ನನ್ನ ಫೀಲ್ಡ್ಅನ್ನು ಗುರುತಿಸಿಕೊಂಡು ಅದಕ್ಕೆ ಸ್ಪಂದಿಸಿದ ವಿಶ್ವವಿದ್ಯಾಲಯವನ್ನು ಹುಡುಕಿ ಪ್ರವೇಶ ಪರೀಕ್ಷೆ ಬರೆದು ಪಾಸುಮಾಡಿ ಓದಲು ತಯಾರಾಗಿ ನಿಂತುಬಿಟ್ಟೆ . ಆಗಲೇ ನಾನು ಅರ್ಜಿ ಹಿಡಿದು ಮೇಷ್ಟ್ರ ಬಳಿ ಓಡಿದ್ದು . ನನ್ನ ಹುಂಬತನ ಹುಚ್ಚು ಯಾವುದನ್ನೂ ಪರಿಗಣಿಸದೆ ಈಕೆ ಮಾಡಬಲ್ಲಳು ಎಂಬ ನಂಬುಗೆಯಿಂದ ಒಮ್ಮೆಗೇ ಅರ್ಜಿಗೆ ಸಹಿ ಹಾಕಿದರಲ್ಲ ಅದು ರಾಮಸ್ವಾಮಿ ಮೇಷ್ಟ್ರ ದೊಡ್ಡತನ . 


ಮುನ್ನಲೆ
***********
ಅರ್ಜಿ ಹಾಕಿದರೆ ಮುಗಿಯಿತೇ ? ಇಲ್ಲ ಅದು ಪ್ರಾರಂಭವಷ್ಟೇ .
ಒಂದೆರಡು ಬಾರಿ ನಾನು ಮತ್ತು ರಾಮಸ್ವಾಮಿ ಮೇಷ್ಟ್ರು ಭೇಟಿಯಾಗಿ  ವಿಷಯವನ್ನು ಚರ್ಚಿಸತೊಡಗಿದೆವು .
ಕೊನೆಗೆ ವಸಾಹತುಶಾಹಿ ಸನ್ನಿವೇಶದ ವಿಜ್ಞಾನ ಅದರಲ್ಲೂ ವಿಶೇಷವಾಗಿ ಭೌತಶಾಸ್ತ್ರದ ಬೆಳವಣಿಗೆಯ ಸನ್ನಿವೇಶವನ್ನು ವಿಶ್ಲೇಷಣೆ ಮಾಡೋಣ ಎಂಬ ತೀರ್ಮಾನಕ್ಕೆ ಬಂದೆವು . ಆಗ ಮೇಷ್ಟ್ರು ವೃತ್ತಿನಿರತ ವಿಜ್ಞಾನ ಇತಿಹಾಸಕಾರ ಮತ್ತು ತತ್ವಶಾಸ್ತ್ರಜ್ಞರೊಬ್ಬರು ಜೊತೆಗಿದ್ದರೆ ಒಳ್ಳೆಯದು ಎಂದರು . ನನಗೂ ಸರಿ ಎನ್ನಿಸಿತು . ಆಗ ದುರ್ಬೀನು ಹಾಕಿಕೊಂಡು ಇವರನ್ನು ಹುಡುಕಲು ಶುರುಮಾಡಿದೆ . 


1997 ರ ಒಂದುದಿನ
********************

ಬಸವನಗುಡಿಯ ಬಿ ಪಿ ವಾಡಿಯ ರಸ್ತೆಯಲ್ಲಿರುವ Indian Institute Of World Culture ನಲ್ಲಿ Great Experiments In Science ಎಂಬ ವಿಷಯದ ಮೇಲೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹಲವಾರು ಜನ ಉತ್ತಮೋತ್ತಮ ವಿಜ್ಞಾನಿಗಳು ಭಾಷಣ ಮಾಡಿದರು . ಆ ದಿನದ ಒಂದು ಭಾಷಣ "ಕ್ವಾಂಟಮ್ ಭೌತಶಾಸ್ತ್ರ" ದ ಬೆಳವಣಿಗೆಯ  ಬಗೆಗೆ ವಿಶ್ಲೇಷಣಾತ್ಮಕವಾದ ಭಾಷಣವಾಗಿತ್ತು . ಅದನ್ನು ಕೇಳಿದ ಕೂಡಲೇ ನಾನು ಹುಡುಕುತ್ತಿರುವ ಗುರು ಈ ಭಾಷಣಕರ್ತ ಎಂಬುದು ಸ್ಪಷ್ಟವಾಗಿ ಹೋಯಿತು . ಕಾರ್ಯಕ್ರಮ ಮುಗಿಯುವವರೆಗೂ ಕಾದಿದ್ದ ನಾನು , ಮುಗಿದ ಕೂಡಲೇ ಅವರ ಬಳಿ ತೆರಳಿ ನನ್ನ ಪ್ರವರ ಹೇಳಿಕೊಂಡೆ . ನನ್ನ ಸಂಶೋಧನಾ ಅಭಿಯಾನಕ್ಕೆ ತಾವೂ ಸಹ ಮಾರ್ಗದರ್ಶಕರಾಗಬೇಕು ಎಂದು ವಿನಂತಿಸಿದೆ . ಹೆಚ್ಚಿನದೇನನ್ನೂ ಕೇಳದೆ ನಿಂತನೆಲದಲ್ಲೇ ಆಯಿತು ಮಾರ್ಗದರ್ಶನ ಮಾಡುತ್ತೇನೆ ಎಂದುಬಿಟ್ಟರು ಡಾ ಎಂ ಜಿ  ನರಸಿಂಹನ್ . ನನಗೆ ಬೇಕಾದ ಗುರು ಯಾವ ವಶೀಲಿ ಬಾಜಿ ಇಲ್ಲದೆ ಗುರುತು ಪರಿಚಯವೂ ಇಲ್ಲದೆ ಸಿಕ್ಕಿಬಿಟ್ಟಿದ್ದರು .
"ಆದರೆ" ಎಂದರು ನರಸಿಂಹನ್  , "ಏನು ಮೇಷ್ಟ್ರೇ", ಎಂದೆ  "ನಾನು Junior college ನಲ್ಲಿ ಪಾಠ ಮಾಡುತ್ತಿರುವ ಮೇಷ್ಟ್ರು ನೀವು Degree College ನಲ್ಲಿ ಪಾಠ ಮಾಡುತ್ತಿದ್ದೀರಿ ಪರವಾಗಿಲ್ಲವೋ" ಎಂದರು . "ನಿಮ್ಮಲ್ಲಿ ವಿದ್ವತ್ತು ಇದೆ ನನಗೆ ಕಲಿಯುವ ಆಸಕ್ತಿಯಿದೆ ಅಲ್ಲಿಗೆ ಮುಗಿಯಿತು" ಎಂದೆ . "ವಿಶ್ವವಿದ್ಯಾಲಯದವರು ಒಪ್ಪುತ್ತಾರೊ ?" ಎಂದರು "ಅದು ನನಗಿರಲಿ" ಎಂದು ಹೇಳಿ ಮನೆಗೆ ಬಂದೆ .  ಇದಾದ ಕೆಲವೇ ದಿನಗಳಲ್ಲಿ ನರಸಿಂಹನ್ National Institute Of Advance Studies ಇಲ್ಲಿಗೆ ನಿಯೋಜನೆಗೊಂಡರು . ಅಲ್ಲಿಂದಾಚೆಗೆ ಎಲ್ಲ ಸಂಕಷ್ಟಗಳೂ ಪರಿಹಾರವಾದವು . 

1997 ರಿಂದ  PhD ಪದವಿಯವರೆಗೆ
************************
ಇಬ್ಬರೂ ಗುರುಗಳು ಸಿಕ್ಕಿದ ಮೇಲೆ ಸಾಕಷ್ಟು ವಿಸ್ತೃತವಾದ ಚರ್ಚೆ ಆದನಂತರ "ಪ್ರಬಂದದ ಸಾರಾಂಶ" ವನ್ನು ವಿಶ್ವವಿದ್ಯಾಲಯಕ್ಕೆ ಕಳುಹಿಸಿದ್ದಾಯಿತು . ವಿ ವಿ ಯವರು ನಡೆಸುವ ಸಂಶೋಧನಾ ಕಮ್ಮಟಗಳಲ್ಲಿ ಭಾಗವಹಿಸಿ ಸಣ್ಣ ಪುಟ್ಟ ಪ್ರಭಂದಗಳನ್ನು ಮಂಡಿಸಿ ಆಸ್ತಿತ್ವ ಸ್ಥಾಪಿಸಿದ್ದಾಯಿತು . ನಿದ್ದೆ ಎಂಬುದು ಕನಸಿನ ಗಂಟಾಗಿ ಹೋಗಿತ್ತು . ಒಂದೆಡೆ ಮನೆ ಕೆಲಸ ,ಮತ್ತೊಂದೆಡೆ ಕಾಲೇಜು ಕೆಲಸ ಇದರ ಜೊತೆಗೆ U  K G ಓದುತ್ತಿದ್ದ ನನ್ನ ಪುಟ್ಟ ಕೂಸು ನಿರಂಜನ ಇವೆಲ್ಲದರ ಜೊತೆಗೆ PhD ಅಧ್ಯಯನ ಸಾಗಿತ್ತು . ಹೀಗಿರಲಾಗಿ ಒಂದು ದಿನ ನಾನು  NIAS ಗೆ ತೆರಳಿದ್ದಾಗ ನನ್ನ ಪರಿಪಾಟಲು ಕಂಡು ಮೇಷ್ಟ್ರಿಗೆ ಏನನ್ನಿಸಿತೋ ಏನೋ "ಕಮಲಾ  ಇನ್ನು ಮುಂದೆ ನೀನಿರುವಲ್ಲಿಗೆ ಬಂದು ನಾನು ಪಾಠ ಹೇಳುತ್ತೇನೆ , ನೀನು ಇಷ್ಟೊಂದು ಕಷ್ಟ ಪಡುವುದು ಬೇಡ " ಎಂದು ಬಿಟ್ಟರು . ಒಂದು ಕ್ಷಣ ನನಗೆ ಮಾತು ಹೊರಡದಾಯಿತಾದರೂ , " ಮೇಷ್ಟ್ರೇ ನಿಮಗೇಕೆ ಕಷ್ಟ ಇದು ನನ್ನ ಕೆಲಸ  ನನಗೆ ಯಾವ ತೊಂದರೆಯೂ ಇಲ್ಲ ನಾನೇ ಬಂದು ಪಾಠ ಹೇಳಿಸಿಕೊಳ್ಳುತ್ತೇನೆ " ಎಂದೆ .
ಅದಕ್ಕೆ ಮೇಷ್ಟ್ರು " ಅದು ಹಾಗಲ್ಲ ಕಮಲಾ ಅವರೇ , PhD ಅಧ್ಯಯನ ಎಂಬುದು ಒಂದು ಸೃಜನಶೀಲ ಚಟುವಟಿಕೆ , ಇದಕ್ಕೆ ಮನಸ್ಸು ಆರಾಮವಾಗಿರಬೇಕು , ಓಡಾಡಿಕೊಂಡು ಹೆಚ್ಚು ಸಮಯವನ್ನು ವ್ಯಯಮಾಡಿ ಮಾಡತಕ್ಕದ್ದಲ್ಲ, ನಿಮ್ಮ ಸಮಯವನ್ನು ಅಧ್ಯಯನಕ್ಕೆ ವಿನಿಯೋಗಿಸಿ" ಎಂದು ಖಂಡಿತವಾಗಿ ಹೇಳಿಬಿಟ್ಟರು . ಇದಾದ ನಂತರ ಮುಂದೆ ಪದವಿ ಪಡೆಯುವ ವರೆಗೂ, ಅನಂತರವೂ, ಇಬ್ಬರೂ ಗುರುಗಳು ನಾನು ಓದುವಂತೆ ನೋಡಿಕೊಂಡರು . 

               ಪದವಿ ಪ್ರಧಾನ ಸಮಾರಂಭದ ದಿನ (2000,ಡಿಸೆಂಬರ್ ),ಪಲ್ಲವಿ ಏಳು ತಿಂಗಳ ಮಗು . 

PhD ಎಂಬುದು ಕೆಲವರಿಗೆ ದುಃಸ್ವಪ್ನ ದಂತೆ ಕಾಡಿ ಅಧ್ಯಯನ ಮುಗಿದ ಮೇಲೆ ಇನ್ನೆಂದಿಗೂ ಆ ದಿಕ್ಕಿನಲ್ಲಿ ತಲೆಹಾಕಿ ಮಲಗುವುದಿಲ್ಲ ಎಂಬ ಶಪಥವನ್ನು ಮಾಡಿಸಿಬಿಡುತ್ತದೆ . ಆದರೆ ಈ ಇಬ್ಬರೂ ಗುರುಗಳು ಅದಕ್ಕೆ ವಿರುದ್ದವಾಗಿ PhD ಅಧ್ಯಯನ ಮಾಡುವುದು ದೊಡ್ಡದಲ್ಲ , ಅನಂತರ ಅದರ ಪ್ರಯೋಜನ ಸಮಾಜಕ್ಕೆ ದಕ್ಕಬೇಕು ಎಂಬ ಉದಾತ್ತ ಆಶಯದೊಂದಿಗೆ ಶಿಷ್ಯರ ಮನಸ್ಸನ್ನು ಕಾದು ಅವರನ್ನು ಸಮಾಜಮುಖಿಯಾಗಿ ಆಲೋಚನೆ ಮಾಡುವಂತೆ ಮಾಡಿದ್ದಾರೆ . ಇದಕ್ಕಾಗಿ ಇವರಿಬ್ಬರೂ ಅಭಿನಂದನಾರ್ಹರು .
ನಿಮ್ಮಂತಹ ಗುರುಗಳ ಸಂತತಿ ಹೆಚ್ಚಾಗಲಿ ಎಂದು ಆಶಿಸುತ್ತಾ , ಶಿಕ್ಷಕರ ದಿನಾಚರಣೆಯ ಸಂಧರ್ಭದಲ್ಲಿ ನಿಮಗೆ ಮತ್ತೊಮ್ಮೆ ನಮಸ್ಕರಿಸುತ್ತಾ ಈ ಲೇಖನ ಮುಗಿಸಲು ಇಚ್ಚಿಸುತ್ತೇನೆ .

Comments to this article can be sent at my email:yckamala@gmail.com

Thursday 27 June 2013

ಮುಂಬೈ ಎಂಬ ಬೆಡಗಿಯೂ , ಸಾಂಪ್ರದಾಯಿಕ ಸುಂದರಿಯೂ ಹಾಗೂ (ಮಹಾಕೊಳಕಿಯೂ ).

ನಾನು ಮುಂಬೈಗೆ ಮೊತ್ತಮೊದಲ ಭೇಟಿಕೊಟ್ಟದ್ದು 1995 ರಲ್ಲಿ . ಸೌದಿಅರೆಬಿಯ ಹೋಗುವ ದಾರಿಯಲ್ಲಿ ವಿಮಾನ ನಿಲ್ದಾಣದ ನೆಲವನ್ನಷ್ಟೇ ಸ್ಪರ್ಶಿಸಿ ಮತ್ತೆ ಮೇಲೆ ಹಾರಿದ್ದೆ . ಅನಂತರದ ವರ್ಷಗಳಲ್ಲಿ ಹಲವಾರು ಬಾರಿ ಈ ಬೆಡಗಿಯ ಬಳಿ ಬಂದಿದ್ದೆನಾದರೂ ಕೆಲವು ಸನ್ನಿವೇಶಗಳು ಮಾತ್ರ ಸ್ವಾರಸ್ಯಕರ ವಾಗಿವೆ . ಅದರಲ್ಲಿ TIFR ನವರು YISC Young Indian Scientist Colloquium ಆಹ್ವಾನಿಸಿದಾಗ ಬಂದದ್ದೂ ಒಂದು . ಈಗ್ಗೆ ಕೆಲವರ್ಷಗಳ ಹಿಂದೆ YISC ಎಂಬ ಕಾರ್ಯಕ್ರಮ ನಡೆಸಿ ದೇಶಾದ್ಯಂತ ನೂರುಜನ ಕಾಲೇಜು ಅಧ್ಯಾಪಕರನ್ನು ಇದರಲ್ಲಿ ಭಾಗವಹಿಸಲು ಆಹ್ವಾನಿಸಿದ್ದರು . ಅದರಲ್ಲಿ ನಾನೂ ಒಬ್ಬಳಾಗಿದ್ದೆ . ನನಗೆ ಪತ್ರಬಂದ ಕೂದಲೆ TIFRಗೆ ಮೇಲ್ ಮಾಡಿದ ನಾನು ಬೆಂಗಳೂರಿನಿಂದ ಬೇರೆಯಾರನ್ನು ಅಹ್ವಾನಿಸಿದ್ದೀರಿ ? ಎಂದು ಕೇಳಿದಾಗ ಶೋಭಾ ಮತ್ತು ಶರ್ಮಿಷ್ಠ ಎಂಬ ಹೆಸರನ್ನು ಕಳುಹಿಸಿದರು . ಅರೆರೆ ಈ TIFR ನವರಿಗೆ ನಮ್ಮ ಹೆಸರನ್ನು ಕೊಟ್ಟವರಾರು? ಅದರಲ್ಲೂ ನಾವು ಮೂವರೂ ಸ್ನೇಹಿತೆಯರೆಂದು ಇವರಿಗೆ ಹೇಳಿದವರಾರು ? (ಗೊತ್ತಿದ್ದರೆ ಕಳಿಸುತ್ತಿರಲಿಲ್ಲ ಬಿಡಿ ) ಎಂದೆಲ್ಲಾ ಯೊಚಿಸಿದೆವರಾದರೂ ಅದನ್ನು ಅಲ್ಲಿಗೆ ಬಿಟ್ಟು ಒಂದೇ ರೈಲಿಗೆ ಮತ್ತು ವಾಪಸು ವಿಮಾನಕ್ಕೆ ಟಿಕೆಟ್ ಬುಕ್ ಮಾಡಿದೆವು . ಪ್ರಯಾಣಕ್ಕೆ ಅಗತ್ಯ ವಾದ ತಿಂಡಿ ತೀರ್ಥಗಳನ್ನು ಕಟ್ಟಿಕೊಂಡೆವು (ಹೇಳಿ ಕೇಳಿ ಮೂವರು ಹೆಂಗಸರು ). ಅನಂತರ ರೈಲನ್ನೇರಿದನಾವು ಅದೆಷ್ಟು ಮಾತನಾಡಿದ್ದೇವೆಂದರೆ ನಮ್ಮ "ಬಾಯಿ ಬೊಂಬಾಯಿ " ಯಾ ಮಾತು ನಡೆಯುತ್ತಿರುವಂತೆ ಮುಂಬೈ VT ನಿಲ್ದಾಣ ಬಂದೇ ಬಿಟ್ಟಿತು . ಅಲ್ಲಿನಂದ ನಮಗೆ ಗೊತ್ತು ಮಾಡಿದ್ದ ಮೇಡಂ ಕಾಮ ರಸ್ತೆಯ (ಚರ್ಚ್ ಗೇಟ್ ಪ್ರದೇಶ ) ವಸತಿಯಲ್ಲಿ ಉಳಿದೆವು . ಮಾರನೆಯದಿನ ಕೊಲಾಬದಲ್ಲಿರುವ TIFR ತಲುಪಿ ಉಪನ್ಯಾಸಗಳನ್ನು ಕೇಳಲು ಶುರುಮಾಡಿದೆವು . ಭಾರತದಲ್ಲಿ ಅತ್ಯುತ್ತಮವಾಗಿ ಸಂಶೂದನೆ ಮಾಡುತ್ತಿರುವ ಯುವ ವಿಜ್ಞಾನಿಗಳು 5 ದಿನಗಳ ಕಾಲ ಅವ್ಯಾಹತವಾಗಿ ನೀಡಿದ ಉತ್ತಮೋತ್ತಮ ಉಪನ್ಯಾಸಗಳು ಅವಾಗಿದ್ದವು . ಉಪನ್ಯಾಸದಬಗ್ಗೆ ಹೇಳಿ ನಿಮ್ಮತಲೆ ಕೊರೆಯಲಾರೆ , ಬದಲಿಗೆ ಮುಂಬೈನ ಬೇರೆ ಅನುಭವಗಳನ್ನು ನಿಮಗೆ ಹೇಳುತ್ತೇನೆ . ಅಲ್ಲಿದ್ದ ಐದೂ ದಿನವೂ ಬೆಳಗ್ಗೆ 5ಗಂಟೆಗೆ ಕಾಲಿಗೆ ಬೂಟು ಕಟ್ಟಿಕೊಂಡು ನಾನು ಶೋಭಾ ಊರು ಸುತ್ತಲು ಪ್ರಾರಂಬಿಸಿದರೆ (ಶರ್ಮಿಷ್ಠೆಗೆ ಅದರಲ್ಲಿ ಆಸಕ್ತಿಯಿಲ್ಲ ) 7 ಕ್ಕೆ ವಾಪಸು ಬಂದು ಉಪನ್ಯಾಸಕ್ಕೆ ಹೊರಡುವುದು ದಿನಚರಿಯಾಗಿತ್ತು . ಮುಂಬೈನ ಎಡ ಬಲ ಗಲೆಲ್ಲವನ್ನೂ ಸುತ್ತಿ ಮುಗಿಸಿದೆವು . ಇದೇನೂ ವಿಶೇಷವಲ್ಲ ಬಿಡಿ ಮುಂಬೈಗೆ ಬಂದವರೆಲ್ಲರೂ ನೋಡುತ್ತಾರೆ . ಆದರೆ ಕೆಲ ವಿಶೇಷವಿದೆ ಅದನ್ನು ಮಾತ್ರ ಹೇಳುತ್ತೇನೆ .

 Sea Link ಮತ್ತು ಬಾಂದ್ರ - ಕುರ್ಲಾ ಕಾಂಪ್ಲೆಕ್ಸು . 
------------------------------------------

ಕೊನೆಯದಿನ TIFR ನಲ್ಲಿ ಮದ್ಯಾನ್ಹಕ್ಕೆ ಕೆಲಸ ಮುಗಿಯಿತು . ನಮ್ಮ ವಿಮಾನ ಮರುದಿನ ಬೆಳಗ್ಗೆ ಇದ್ದುದರಿಂದ ಪೂರ ಅರ್ಧದಿನ ನಮ್ಮ ಕೈಯ್ಯಲ್ಲಿತ್ತು . ಶೋಭಾ "ಕಮಲಾ ಏನು ಮಾಡೋಣ ಎಂದರು ?". ಅದಾಗ ತಾನೇ ಕುರ್ಲಾ ಯಿಂದ ಬಾಂದ್ರಾ ಗೆ ಹೋಗುವ ಸಮುದ್ರ ಸೇತುವೆ ಉದ್ಘಾಟನೆ ಗೊಂಡಿದ್ದು ಬೆಂಗಳೂರಿನ ಪೇಪರ್ ಗಳಲ್ಲಿ ಮತ್ತು ಅಂತರಜಾಲದಲ್ಲಿ ದೊಡ್ಡ ಸುದ್ದಿಯಾಗಿತ್ತು . ಆದ್ದರಿಂ"ದ "ನಡೆಯಿರಿ ಸಮುದ್ರದ ಸೇತುವೆಮೇಲೆ ಹೋಗೋಣ" ಎಂದೆ . ಕೊಲಬದ TIFR ಮುಂಬಾಗದಲ್ಲಿ ಟ್ಯಾಕ್ಸಿ ಹತ್ತಿ ಸ್ಟೈಲ್ಆಗಿ "ಬಾಂದ್ರಾಗೆ ಸೇತುವೆಮೇಲೆ ಹೋಗು" ಎಂದೆವು .ಆತ "ಸೇತುವೆ ಫೀಸು ನಿಮ್ಮದೇ " ಎಂದ . "ಆಯಿತಪ್ಪ ನಡಿ " ಎಂದು ಮಾತನಾಡುತ್ತಾ ಕುಳಿತೆವು . ಸೇತುವೆಯಮೇಲೆ ಹೋಗುವಾಗ ಮಜಾ ಎನಿಸಿತು . ಬಾಂದ್ರಾ ಬಂದ ಕೂಡಲೆ ಆತ "ಬಾಂದ್ರದಲ್ಲಿ ಎಲ್ಲಿಗೆ ಹೋಗಬೇಕು" ಎಂದ . "ಒಂದು ಕಾಂಪ್ಲೆಕ್ಸ್ ಗೆ ಬಿಡು ಎಂದೆವು "(ಎಲ್ಲಿಗೆ ಹೋಗಬೇಕು ಎಂದು ಯೋಚಿಸಿದ್ದರೆ ತಾನೇ?). ಆತ ಸೀದಾ ತಂದು "ಬಾಂದ್ರಾ - ಕುರ್ಲಾ ಕಾಂಪ್ಲೆಕ್ಸ್ " ಬಳಿ ನಿಲ್ಲಿಸಿ "ಯೇ ಮುಂಬೈ ಕೆ ಸಬ್ ಸೆ ಬಡಾ ಕಾಂಪ್ಲೆಕ್ಸ್ ಹೈ . ಇಸ್ ಕಾ ನಮ್ ಹೈ ಬಾಂದ್ರಾ -ಕುರ್ಲಾ ಕಾಂಪ್ಲೆಕ್ಸ್ ಹೈ " ಎಂದು ಹೇಳಿ ದುಡ್ಡು ಪಡೆದು ಹೋದ . ಇತ್ತ ಶೋಭಾ "ಕಮಲಾ ಇದೇನಿದು ಕಾಂಕ್ರೀಟ್ ಕಾಡು , ಎನೂ ಅಂಗಡಿ ಮುಂಗಟ್ಟು ಕಾಣುತ್ತಿಲ್ಲ ಎಂದರು". ನಾನು ಕತ್ತೆತ್ತಿ ನೋಡಿದೆ National Stock Exchange(NSE) ಬೋರ್ಡ್ ದೊಡ್ಡ ಕಟದದ ಮೇಲೆ ಕಾಣಿಸಿತು . ಇತರೆ ಬ್ಯಾಂಕು ಆಫೀಸು ಗಳ ಬೋರ್ಡು ಕಂಡವು . ಆಗ ಶೋಭಾಗೆ ಹೇಳಿದೆ " ಶೋಭಕ್ಕ ನೀನು ಬ್ಯಾಂಕ್ ಆಫಿಸರನ ಹೆಂಡತಿಯಲ್ಲವೋ ಅದು ಡ್ರೈವರನಿಗೆ ಕನಸು ಬಿದ್ದಿರಬೇಕು ,ಆದ್ದರಿಂದಲೇ ಈ ಲಕ್ಷ್ಮೀ ಪೀಠದ ಮುಂದೆ ತಂದು ನಿಲ್ಲಿಸಿದ್ದಾನೆ , ಬಾ ಈ ಕಾಂಪ್ಲೆಕ್ಸ್ ನಲ್ಲಿ ಏನಿದೆ ನೋಡಿ ಬರೋಣ " ಎಂದೇ . ಆದರೆ ಅಂದು ಕಟ್ಟಡದಲ್ಲಿ ಬಾಂಬ್ ಇಟ್ಟಿದ್ದಾರೆ ಎಂಬ ಹುಸಿ ಕರೆ ಬಂದಿತ್ತಂತೆ ಹಾಗಾಗಿ ನಾವು ಒಳ ಹೋಗುವ ಬದಲು ಅಲ್ಲಿದ್ದವರನ್ನೇ ಹೊರ ಕಳುಹಿಸುತ್ತಿದ್ದರು . ಸೇತುವೆ ಮೇಲೆ ಬಂದದ್ದಷ್ಟೆ ಲಾಭ ಎಂದು ಕೊಂಡು ವಾಪಾಸು ಹೊರಟೆವು . 


ಮೊತ್ತಮೊದಲ ಲೋಕಲ್ ಟ್ರೈನ್ ಪ್ರಯಾಣ 
-------------------------------------
 ಮುಂಬೈ ಲೋಕಲ್ ಟ್ರೈನ್ ಬಗ್ಗೆ ಸಾಕಷ್ಟು ಕಥೆ ಕೇಳಿದ್ದೆವಾದರೂ ಅನುಭವ ಇರಲಿಲ್ಲ . ಆದ್ದರಿಂದ " ಶೋಭಾ ನಮಗೆ ಊರು 
 ಕೇರಿ ಸರಿಯಾಗಿ ಗೊತ್ತಿಲ್ಲ , ಆದ್ದರಿಂದ ಸುಮ್ಮನೆ ಬಾಂದ್ರಾದಿಂದ ರೈಲು ಹತ್ತಿ ಚರ್ಚ್ ಗೇಟ್ ಗೆ ಹೋಗೋಣ " ಎಂದೆ . ಶೋಭಾ ಸುಮ್ಮನೆ ತಲೆ ಆಡಿಸಿದರು (ಬೇರೆನು ಮಾಡಲು ಸಾಧ್ಯ ಹೇಳಿ ?). ಬಾಂದ್ರ ನಿಲ್ದಾಣಕ್ಕೆ ಬಂದು ಒಬ್ಬರಿಗೆ 6 ರುಪಾಯಿ ಕೊಟ್ಟು ಚರ್ಚ್ ಗೇಟ್ ರೈಲು ಹತ್ತಿದೆವು . ಕೇವಲ ಹದಿನೈದು ನಿಮಿಷದಲ್ಲಿ ಚರ್ಚ್ ಗೇಟ್ ಗೆ ಬಂದು ಇಳಿದದ್ದು ಬೆಂಗಳೂರಿನ ನಮಗೆ ಸೋಜಿಗದಂತೆ ಕಂಡಿತು . (ಏಕೆಂದರೆ ಬೆಂಗಳೂರಿನಲ್ಲಿ ಕೆಲವೊಮ್ಮೆ 4 ಕಿ ಮಿ ದಾರಿ ಒಂದು ಗಂಟೆ ತೆಗೆದು ಕೊಳ್ಳುತ್ತದೆ!!!!!!!!!! ). ನಾವು ರಾತ್ರಿ ರೂಮಿಗೆ ಬಂದು ಫೋನು ಮಾಡಿ ಹೇಳಿದ್ದೆ ಹೇಳಿದ್ದು (ಕಂಡಿರಲಿಲ್ಲ ವಲ್ಲ ಅದಕ್ಕೆ . ಈಗ ಬಿಡಿ ವಿವಿದ ಲೈನುಗಳು ಸ್ಟೇಷನ್ ಗಳು ಅಲ್ಪ ಸ್ವಲ್ಪ ಗೊತ್ತಾಗಿದೆ ). ಅನಂತರ ನಿದ್ದೆ ಮಾಡಿ ಮೇಲೆದ್ದು ದಡಬಡಾಯಿಸಿ ಪ್ಯಾಕ್ ಮಾಡಿಕೊಂಡು ವಿಮಾನವೇರಿ ಬೆಂಗಳೂರಿಗೆ ಬಂದೆವು . ಹೀಗಿತ್ತು ನಮ್ಮ ವಿಶೇಷ ಅನುಭವ . ಇದೆಲ್ಲಾ ಯಾಕೆ ಜ್ಞಾಪಕಕ್ಕೆ ಬಂತು ಎಂದರೆ ಮುಂಬೈ ಎಂಬ ಬೆಡಗಿಯೂ , ಸಾಂಪ್ರದಾಯಿಕ ಸುಂದರಿಯೂ ಮತ್ತು (ಮಹಾಕೊಳಕಿಯ ) ಬಳಿ ಹೋಗುವ ದಿನ ಮತ್ತೆ ಬಂದಿದೆ ಅದಕ್ಕೆ . ದೇಶದ ವಿವಿದ ಪ್ರದೇಶದಿಂದ ಬರುವ ಅಕಾಡೆಮಿಕ್ ಸ್ನೇಹಿತರು , ಬೆಂಗಳೂರಿನ ಸ್ನೇಹಿತರು ಎಲ್ಲರೂ ಸೇರಿ ಕೆಲಸ ಮುಗಿಸಿ ಹರಟೆ ಕೊಚ್ಚುವುದು ಇಲ್ಲಿಯೇ . ಆದ್ದರಿಂದಲೇ ಮುಬೈಗೆ ಬರುವುದೆಂದರೆ ನಮಗೆ ಅಪ್ಯಾಯಮಾನ . ಮುಂಬೈ ಬಗೆಗಿನ ಇನ್ನೂ ಹಲವಾರು ವಿಶೇಷ ಕಥೆಗಳಿವೆ , ಅಮಿತಾಭ್ ಬಚ್ಚನ್ ಮನೆ , ಮುಂಬೈ ಮಳೆ , ಜುಹೂ ಬೀಚು ಇತ್ಯಾದಿ ಇತ್ಯಾದಿ ಮುಂದೊಮ್ಮೆ ಯಾವಾಗಲಾದರೂ ಬರೆಯೋಣ . ಈಗ ಇಷ್ಟೇ ಟೈಪಿಸಲು ಆಗುತ್ತಿರುವುದು . ಟೈಮಾಯಿತ. 











Monday 10 June 2013

ಚಂದ್ರಿಕಾ ಒಂದು ಆಪ್ತ ನೆನಪು

ನಿನ್ನೆ ಸಂಜೆ( 9-6-2013) 6 30 ರಿಂದ 7 ಗಂಟೆ
-----------------------------------------

ನಿನ್ನೆ ಸಂಜೆ (9-6-2013) K R ಆಸ್ಪತ್ರೆಯ I C U ನಲ್ಲಿ ನಿಸ್ತೇಜವಾಗಿದ್ದ ಚಂದ್ರಿಕಳ ಕೈಗಳನ್ನು ಮುಟ್ಟಿ ನೋಡಿದೆ ತಣ್ಣಗಾಗಿತ್ತು . ಹಣೆಯಮೇಲೆ ಕೈಯಿಟ್ಟೆ ಬೆಚ್ಚಗಿತ್ತು . B P 51/33, Pulse 104, ಎಂದು ಮೆಶಿನು ತೋರಿಸುತ್ತಿತ್ತು . ಶೋಭಾ ಕೂಡ ನೋಡಿಬಂದರು . ಶೋಭಾ, ಚಂದ್ರಿಕಾ ನಾಳಿನ "ಬೆಳಕು ಕಾಣುವುದಿಲ್ಲ " ಎಂದೆ . "ಹಾಗೆಲ್ಲ ಅನ್ನಬೇಡಿ ಕಮಲಾ" ಎಂದರು ಶೋಭಾ . ಮನೆಯವರನ್ನು ಮಾತನಾಡಿಸಿ ಹೊರಬಂದೆವು . ಅದೂ ಇದೂ ಮಾತನಾಡಿದೆವು . ಇಬ್ಬರೂ ನಮ್ಮ ನಮ್ಮ ಸ್ಕೂಟರ್ ಸ್ಟಾರ್ಟ್ ಮಾಡಿಕೊಂಡು ಹೊರಟೆವು . ಗಾಡಿನಿಲ್ಲಿಸಿದ ನಾನು ಶೋಭಾ ವಿಷಯಗೊತ್ತಾದರೆ ಕೂಡಲೆ ತಿಳಿಸಿ ಎಂದು ಹೇಳಿ ಮುಂದುವರೆದೆ . ಮನೆಗೆ ಬಂದು ಎಲ್ಲ ಕೆಲಸ ಮುಗಿಸುವ ಹೊತ್ತಿಗೆ ಚಂದ್ರಿಕಾ ಇನ್ನಿಲ್ಲ ಎಂಬ ಸುದ್ದಿ ಅಲೆಯಲ್ಲಿ ತೇಲಿ ಬಂದೇಬಿಟ್ಟಿತು .

ಮಳವಳ್ಳಿ ಯಿಂದ ಬೆಂಗಳೂರಿಗೆ
----------------------------------------

ಚಂದ್ರಿಕಾ ನ್ಯಾಷನಲ್ ಕಾಲೇಜಿನಲ್ಲಿ BSc ಓದಿದ ನಂತರ ಸೆಂಟ್ರಲ್ ಕಾಲೇಜಿನಲ್ಲಿ MSc ಭೌತಶಾಸ್ತ್ರ ಪದವಿ ಪಡೆದ ತರುವಾಯದಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿಯ ಕಾಲೇಜೊಂದರಲ್ಲಿ ಉಪನ್ಯಾಸಕಿಯ ಕೆಲಸ ಪ್ರಾರಂಭಿಸಿದರು . ತಂದೆ ತಾಯಿ , ತಮ್ಮ ತಂಗಿಯರ ದೊಡ್ಡ ಕುಟುಂಬದ ಹಿರಿಯ ಮಗಳಾಗಿ ಮನೆಗೆ ಆಸರೆಯಾಗಿ ನಿಂತರು .
ಉತ್ತಮ ಅಧ್ಯಾಪಕಿಯಾಗಿ ಹೆಸರು ಮಾಡಿದ ಚಂದ್ರಿಕಾ ವಿದ್ಯಾರ್ಥಿ ಮತ್ತು ಅಧ್ಯಾಪಕವರ್ಗ ಇಬ್ಬರಿಗೂ ಸಹಾಯ ವಾಗುವಂತಹ ಕೆಲಸಗಳಲ್ಲಿ ಅಲ್ಲಿಂದಲೇ ತೊಡಗಿಕೊಂಡರು . 1990 ರ ದಶಕದಲ್ಲಿ ದಾ. ಗುರುರಾಜ ಕರಜಗಿ ಯವರ ಕಣ್ಣಿಗೆಬಿದ್ದ ಚಂದ್ರಿಕಾ ಅನಂತರ ಬೆಂಗಳೂರಿನ V V S ಕಾಲೇಜಿನಲ್ಲಿ ಪ್ರತಿಷ್ಟಾಪಿತರಾದರು .

ಬೆಂಗಳೂರಿನಿಂದ ಭಾರತಾದ್ಯಂತ ಚಟುವಟಿಕೆ ವಿಸ್ತರಿಸಿ ಕೊಂಡ ಚಂದ್ರಿಕಾ .
----------------------------------------------------------------------------------

V V S ಕಾಲೇಜಿಗೆ ಬಂದದ್ದು ಚಂದ್ರಿಕಳಿಗೆ ನಾಲ್ಕು ಕೈ ಕಾಲುಗಳು ಹೆಚ್ಚಾಗಿ ಬಂದಂತಾದುವು . ಅದಕ್ಕೆ ಪೂರಕವಾಗಿ ಆಕೆಯ ಕಾರ್ಯಚಟುವಟಿಕೆಯನ್ನು ಅಂದಿನ ಪ್ರಾಂಶುಪಾಲರಾಗಿದ್ದ ಕರಜಗಿಯವರೂ ಪ್ರೋತ್ಸಾಹಿಸಿದರು . ಅದರ ಪರಿಣಾಮವಾಗಿ ಬಸವೇಶ್ವರನಗರ ವಸತಿ ಪ್ರದೇಶದ ಒಂದು ಎಕರೆ ಜಾಗದಲ್ಲಿರುವ ಸಣ್ಣದಾದ V V S ಕಾಲೇಜಿನಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಾರ್ಯಕ್ರಮಗಳು ಆಯೊಜನೆಗೊಳ್ಳ ತೊಡಗಿದವು . ಆ ಮೂಲಕ ಅಧ್ಯಾಪಕರುಗಳು ಒಂದೆಡೆ ಕಲೆತು ಚರ್ಚಿಸಲು ವೇದಿಕೆ ರೂಪುಗೊಳ್ಳ ತೊಡಗಿತು . ತದನಂತರದ ದಿನಗಳಲ್ಲಿ IAPT ಸಂಘಟನೆಗೆ ಚಳುವಳಿಯ ಮಾದರಿಯಲ್ಲಿ ಸದಸ್ಯತ್ವವನ್ನು ಮಾಡಿಸಿದರು .

IAPT ಯ ರಾಷ್ಟ್ರೀಯ ಅಧಿವೇಶನಗಲ್ಲಿ ಪಾಲ್ಗೊಳ್ಳುವಂತೆ ಅಧ್ಯಾಪಕರನ್ನು ಹುರಿದುಂಬಿಸುತ್ತಿದ್ದ ಚಂದ್ರಿಕಾ , ಅವರಿಂದ ಪ್ರೀತಿಯಿಂದಲೇ ಸಂಶೋಧನಾ ಪ್ರಭಂಧ ಮಂಡಿಸುವಂತೆ ಒತ್ತಾಯಿಸುತ್ತಿದ್ದರು .
ಬೆಂಗಳೂರಿನಿಂದ ಹತ್ತರಿಂದ ಹದಿನೈದು ಪ್ರಭಂದ,ಪೋಸ್ಟರ್ , ಪ್ರಯೋಗಗಳು ಪಾಲ್ಗೊಳ್ಳುವಂತೆ ಮಾಡಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದಿಂದ ಒಳ್ಳೆಯ ಸ್ಫರ್ಧೆಯನ್ನು ಒಡ್ಡುತ್ತಿದ್ದರು .

ಇದರ ಜೊತೆಗೆ IAPT ವಿಧ್ಯಾರ್ಥಿಗಳಿಗೆ ಆಯೋಜಿಸುವ National Graduate Physics Examination, Olympiad ಪರೀಕ್ಷೆಗಳನ್ನು ರಾಷ್ಟ್ರಾದ್ಯಂತ ಆಯೋಜಿಸಿ ಹೆಚ್ಚು ವಿಧ್ಯಾರ್ಥಿಗಳು ಪಾಲ್ಗೊಳ್ಳಲು ಅನೇಕ ಅಧ್ಯಾಪಕರ ಜೊತೆ ಸಂಪರ್ಕದಲ್ಲಿದ್ದು ಸಾಕಷ್ಟು ಕೇಂದ್ರಗಳನ್ನು ತೆರೆಯುವಂತೆ ನೋಡಿಕೊಳ್ಳುತ್ತಿದ್ದರು . IAPT ಯ ಹಲವು ರಾಷ್ಟ್ರಮಟ್ಟದ ಪರೀಕ್ಷೆಗಳು ಪ್ರಾಯೋಗಿಕವಾಗಿದ್ದು ಪ್ರಯೋಗಶಾಲೆ ಬೇಕಾಗುತ್ತಿತ್ತು . ಜೊತೆಗೆ ಸಾಕಷ್ಟು ಅಧ್ಯಾಪಕರ ಉಚಿತ ಸೇವೆಯೂ ಬೇಕಾಗುತ್ತಿತ್ತು . ಇದೆಲ್ಲವನ್ನು ತಮ್ಮ ಕಾಲೇಜಿನಲ್ಲಿ ಮಾಡುತ್ತಿದ್ದ ಚಂದ್ರಿಕಾ ನಂತರ ಬೆಂಗಳೂರಿನ ಇತರೆ ಅಧ್ಯಾಪಕರನ್ನು ಮತ್ತು ಕಾಲೇಜನ್ನು ಇದಕ್ಕೆ ತಯಾರು ಮಾಡಿದರು .

ಚಂದ್ರಿಕಾ ಕಾಲೇಜಿನೊಳಗೆ ಮಾದುವಕೆಲಸವಿದಾದರೆ , ಇನ್ನು ಕಾರ್ಯ ಕಾರಣ ಸಂಭಂಧ ದೇಶ ಸುತ್ತ ಬೇಕಾಗುತ್ತಿತ್ತು . ಆಗೆಲ್ಲಾ ತನ್ನ ಪಾಠ ಪ್ರವಚನಗಳನ್ನು ಮುಗಿಸಿ ಕಾಲೇಜಿನವರ ಜೊತೆ ಮಾತುಕತೆನಡೆಸಿ ರಜೆಹೊಂದಿಸಿಕೊಂಡು ವಯೋವೃದ್ಧ ತಾಯಿಗೆ ನೋಡಿಕೊಳ್ಳುವವರ ವ್ಯವಸ್ಥೆ ಮಾಡಿ ಮೀಟಿಂಗು ಮುಗಿಸಿ ಬರುವಷ್ಟರಲ್ಲಿ ಸುಸ್ತಾಗಿ ಹೋಗಿರುತ್ತಿದ್ದರು . ಆದರೂ ಭೌತಶಾಸ್ತ್ರ ಸಂಭಂದಿಸಿದ ಯಾವುದೇ ಕೆಲಸವಾದರೂ ಉತ್ಸಾಹದಿಂದ ಪುಟಿದೇಳುತ್ತಿದ್ದರು .

ಹೊಸದಾಗಿ ಕಾರ್ಯಕ್ರಮ ಆಯೋಜಿಸುವ ಯಾರಿಗೇ ಆದರೂ ಮುಂದೆ ನಿಂತು ಎಲ್ಲಾ ರೀತಿಯ ಸಹಾಯ ಒದಗಿಸಿ ಕೊಡುತ್ತಿದ್ದರು . ಒಟ್ಟಾರೆಯಾಗಿ ಇಂದು ಬೆಳಗ್ಗೆ ನಮ್ಮ ರಾಘವೇಂದ್ರ (IISc)
ಹೇಳಿದಂತೆ She was resource person for resource persons.

ನಾನು ಚಂದ್ರಿಕಾ ಮತ್ತು ದೆಹಲಿ
------------------------------------
ನಾನು ಮತ್ತು ಚಂದ್ರಿಕಾ 2009 ರಲ್ಲಿ ಕಾನ್ಪುರಕ್ಕೆ ಒಟ್ಟಿಗೇ ಹೋಗಿದ್ದೆವು( conference ಮತ್ತು ಕೆಲಸದ ಸಂಭಂದ) . ಒಂದುವಾರ ಇಬ್ಬರೂ ಒಂದೇ ರೂಮಿನಲ್ಲಿದ್ದು ಸುತ್ತಾಡಿದ್ದು ಜೀವಂತ ಅನುಭವ . ಕಾನ್ಪುರದಿಂದ ದೆಹಲಿಗೆ ಬಂದ ನಾವಿಬ್ಬರೂ ಕರ್ನಾಟಕ ಭವನದಲ್ಲಿ ಉಳಿದುಕೊಂಡಿದ್ದೆವು . 2012 ರಲ್ಲಿ ನಡೆಯಲಿದ್ದ ಏಶಿಯನ್ ಫಿಸಿಕ್ಸ್ ಒಲಿಂಪಿಯಾಡ್ ನಡೆಸುವ ಸಂಭಂಧದಲ್ಲಿ DST ಯಲ್ಲಿ ಹಣಕಾಸು ಸಂಭಂಧದ ಫೈಲು ಮೂವ್ ಮಾಡಿಸಬೇಕಿತ್ತು . ಕಪಿಲ್ ಸಿಬಲ್ ಅವರ ಕಚೇರಿಗೆ ತೆರಳಿದವು . ಅದಕ್ಕೂ ಮುನ್ನ ದೆಹಲಿಯಲ್ಲಿದ್ದ ನನ್ನ ದೊಡ್ಡಣ್ಣ ನಾನೇನಾದರೂ ಸಹಾಯ ಮಾಡಲೇ ಎಂದು ಚಂದ್ರಿಕಳನ್ನು ಕೇಳಿದಾಗ ಬೇಡ ಸರ್ ನಾನೆಲ್ಲಾ ವ್ಯವಸ್ಥೆ ಮಾದಿದ್ದೇನೆನ್ದರು . ಕೇಂದ್ರ ಸರ್ಕಾರಿ ಕಚೇರಿ ಯೊಳಗೆ ಸಲೀಸಾಗಿ ಓಡಾಡ ಬಲ್ಲವರನ್ನು ಮೊದಲೇ ಗೊತ್ತುಮಾಡಿದ್ದ ಚಂದ್ರಿಕಾ ಅರ್ಧ ದಿನದೊಳಗೆ ಎಲ್ಲ ಕೆಲಸ ಮುಗಿಸಿ ಕೊಂಡರು . ಆಗಲೇ ನನಗೆ ಚಂದ್ರಿಕಳ ಬುದ್ದಿವಂತಿಕೆ ಮತ್ತು ಪವರ್ ಅರ್ಥವಾಗಿದ್ದು . "ಕಮಲಾ ದೂರದ ಊರಿನಿಂದ ಬಂದಿರುತ್ತೇವೆ ಕೆಲಸ ಮುಗಿಸಿಕೊಂಡು ಹೋಗಬೇಕಾಗುತ್ತದೆ ಅದಕ್ಕಾಗಿ ಗೊತ್ತಾದವರನ್ನು ಹಣಕೊಟ್ಟದರೂ ಹೊಂದಿಸಿಕೊಳ್ಳಬೇಕು "ಎಂದು ಹೇಳಿದ್ದು ಇನ್ನು ನನ್ನ ಕಿವಿಯಲ್ಲಿದೆ .
ಚಂದ್ರಿಕಾ ಈ ವರ್ಷ ಆಗಸ್ಟ್ ತಿಂಗಳಿನಲ್ಲಿ ನಿವೃತ್ತಿ ಹೊಂದಲಿದ್ದರು . ನಿವೃತ್ತಿಯನಂತರ ಪ್ರವೃತ್ತಿಯನ್ನೇ ಪೂರ್ಣ ವೃತ್ತಿಯನ್ನಾಗಿಸಿಕೊಳ್ಳುವ ತಯಾರಿಯಲ್ಲಿದ್ದ ಚಂದ್ರಿಕಾ ಅಕಾಲ ಮರಣವನ್ನಪ್ಪಿದ್ದು ಇದು ಯಾವ ನ್ಯಾಯ ಎಂದು ಕೇಳುವಂತಾಗಿದೆ . ಆದರೆ ಯಾರನ್ನು ಕೇಳೋಣ ?
ಚಂದ್ರಿಕಾ ಮನಸ್ಸು ಮಾಡಿದ್ದರೆ ತಿಂಗಳಿಗೆ ಲಕ್ಷಾಂತರ ರೂಪಯಿಯನ್ನು ಪಾಠ ಮಾಡಿ ಸಂಪಾದಿಸ ಬಹುದಾಗಿತ್ತು . ಅದಕ್ಕೆ ಅವರಿಗೆ ಹಲವು corporate tuition center ಗಳಿಂದ ಆಹ್ವಾನವು ಇತ್ತು .

ಚಂದ್ರಿಕಾ ಕಾಫಿ ಕುಡಿಯಲಿಲ್ಲ .
---------------------------------
ಈಗ್ಗೆ ಹತ್ತು ದಿನಗಳ ಹಿಂದೆ ರಾತ್ರಿ ಶೋಭಾ, ಚಂದ್ರಿಕಾಳ ಮನೆಗೆ ತೆರಳಿ, ಚಂದ್ರಿಕಾರನ್ನು ಕರೆತಂದು ಆಸ್ಪತ್ರೆಗೆ ಸೇರಿಸಿ, B positive ರಕ್ತ ಬೇಕೆಂದು ನನಗೆ ಬೆಳಗ್ಗೆ ಫೋನು ಮಾಡಿದರು . ಬೆಳಗ್ಗೆ 7 ಗಂಟೆ ಹೊತ್ತಿಗೆ ನನ್ನ ಮಗನನ್ನು ಕರೆದುಕೊಂಡು ಆಸ್ಪತ್ರೆಯಲ್ಲಿದ್ದೆ . ಅಷ್ಟು ಹೊತ್ತಿಗೆ ಸ್ವಲ್ಪ ಚೇತರಿಸಿ ಕೊಂಡಿದ್ದರು . ಈಗಾಗಲೇ ರಕ್ತ ಕೊಟ್ಟಿದ್ದಾರೆ ಬೇಕಾದ ತಕ್ಷಣ ತಿಳಿಸುತ್ತೇನೆ ಎಂದರು . ಸರಿ ಎಂದೆ . ಒಂದು ಗಂಟೆ ಅವರ ಬಳಿ ಕುಳಿತೆ . ಉತ್ಸಾಹ ತುಂಬುವ ಮಾತನಾಡಿದೆ . ಆಕೆ ನನಗೆ "ಕಮಲಾ ಓಡಾಡಿಕೊಂಡಿರಿ ಇದರಿಂದ ಸಂಪರ್ಕ ಇರುತ್ತದೆ ಕೆಲಸ ಕಾರ್ಯಗಳಿಗೆ ಸಂಪರ್ಕ ಬೇಕು " ಎಂದು ನನಗೇ ಉತ್ಸಾಹ ತುಂಬುವ ಮಾತನ್ನು ಹೇಳಿದರು . "ಅದಿರಲಿ ನೀವು ಮೊದಲು ಹುಷಾರಾಗಿ , ಇನ್ನುಮುಂದೆ ದಿನವೂ ಬೆಳಗ್ಗೆ ನಾನು ಕಾಫಿ ಕಳಿಸುತ್ತೇನೆ . ಹೋಟೆಲಿನ ಕಾಫಿ ಕುಡಿಯಬೇಡಿ . ನಿಮ್ಮ ಮನೆಯಿಂದ ಬರುವವರು ಒಟ್ಟಿಗೇ ಉಪಹಾರ ತರಲಿ ಎಂದೆ ". "ಆಗಲಿ, ನನ್ನ ತಮ್ಮ ಜೊತೆಯಲ್ಲಿರುತ್ತಾನೆ ಅವನು ಹಾಲು ಕುಡಿಯುತ್ತಾನೆ ಎಂದರು "." ಆಯಿತು ಅದನ್ನೂ ಕಳಿಸುತ್ತೇನೆ" ಎಂದು ಹೇಳಿದೆ , ನನ್ನ ಮಗನಿಗೆ ಮಗನೆ ದಿನವೂ ಬೆಳಗ್ಗೆ ಬೇಗ ಎದ್ದು ಆಸ್ಪತ್ರೆ ಕಾಫಿ ಸಪ್ಲೈ ಮಾಡು ಎಂದೆ . ಆತನೂ ಒಪ್ಪಿದ . ಆದರೆ ಅಂದು ಮಧ್ಯಾನ್ಹ ಸಂಕೀರ್ಣತೆಗೊಳಗಾದ ಆಕೆಯ ಆರೋಗ್ಯದಿಂದಾಗಿ I C U ಸೇರಿದರು . ನಂತರದ್ದೆಲ್ಲ ಬರೀ ಔಷಧಿ . ನಾನು ಕಾಫಿ ಕಳಿಸುವ ಪ್ರಮೇಯವೇ ಬರಲಿಲ್ಲ. . ಚಂದ್ರಿಕಾ ಕಾಫಿ ಕುಡಿಯಲಿಲ್ಲ .

ವಿಧಿಯೋ ವಿಪರ್ಯಾಸವೋ ?
----------------------------------

ಒಂದು ವರ್ಷದಿಂದ ಆಸ್ಪತ್ರೆಗೆ ತೋರಿಸುತ್ತಲೇ ಇದ್ದ ಚಂದ್ರಿಕಾಳಿಗೆ ಏನಾಗಿತ್ತು ಎಂಬುದು ನಿಖರವಾಗಿ ಗೊತ್ತಾಗಲೇ ಇಲ್ಲ . ಆಸ್ಪತ್ರೆಯ ಫೈಲು ಮಾತ್ರ ದಪ್ಪಗಾಗಿತ್ತು . ಎಲ್ಲವೂ ಸರಿ ಎಂದು ಬರುತ್ತಿತ್ತು .
ಕೊನೆಗಾದದ್ದು ಮಾತ್ರ ಮಲ್ಟಿಪಲ್ ಆರ್ಗನ್ ಫೇಲ್ಯೂರ್ .

ಚಂದ್ರಿಕಳನ್ನು ಮೊದಲದಿನ ಆಸ್ಪತ್ರೆಯಲ್ಲಿ ಮಾತನಾಡಿಸಿದ್ದು ನಾನು ಮತ್ತು ಶೋಭಾ , ಕೊನೆಯ ದಿನ ಕಳಿಸಿಬಂದದ್ದೂ ನಾವಿಬ್ಬರೇ . ಇದು ಇದೆಂಥಹ ವಿಪರ್ಯಾಸ?

ಚಂದ್ರಿಕಾಳ ಸಾವು ನಮ್ಮೆಲ್ಲರಿಗೂ ತುಂಬಲಾರದ ನಷ್ಟ ನಿಜ . ಆದರೆ ತೊಂಭತ್ತರ ವಯೋವೃದ್ಧ ತಾಯಿ ಈ ಹೊತ್ತಲ್ಲಿ ಭಾವನಾತ್ಮಕವಾಗಿ ಅನಾಥಳಾದದ್ದು ಯಾವ ತಂದೆ ತಾಯಿಗೂ ಬರಬಾರದ ಕಷ್ಟ . ಅದನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ದೇವರು ನೀಡಲಿ .

ಇಂದು ಬೇರಾವ ಕೆಲಸವೂ ಮಾಡಲಾಗದ ನನಗೆ , ಚಂದ್ರಿಕಳ ಬಗ್ಗೆ ತೋಚಿದಷ್ಟು ಬರೆದಿದ್ದೇನೆ . ಇದೊಂದು ಆಪ್ತಬರಹವಷ್ಟೇ . ಚಂದ್ರಿಕಾ ಇದಕ್ಕೂ ಮೀರಿದವರು ಎಂಬುದು ನಮ್ಮೆಲ್ಲರ ಅನಿಸಿಕೆ .
ಕಮಲಾ .

Saturday 8 June 2013

ಡಾ . ಎಚ್ . ನರಸಿಂಹಯ್ಯ - 93

1997- 2004
-----------------




ನಾನು ನ್ಯಾಷನಲ್ ಕಾಲೇಜಿಗೆ ಕೆಲಸಕ್ಕೆ ಸೇರಿದ್ದು 1997ರಲ್ಲಿ . ಅಲ್ಲಿಯವರೆಗೂ ನನಗೂ H N ಗೂ ಹೇಳುವಂತಾ ಸಂಪರ್ಕವೇನೂ ಇರಲಿಲ್ಲ . ಆದರೆ ಅದೇನೋ ಗೊತ್ತಿಲ್ಲ ಕೆಲಸಕ್ಕೆ ಸೇರಿದಾಕ್ಷಣದಿಂದ ಅವರಿಗೂ ನನಗೂ ಉಂಟಾದ ಸ್ನೇಹ ಮಾತ್ರ ಐತಿಹಾಸಿಕ ವಾದದ್ದು (ಕಾಲೇಜಿನ ಮಟ್ಟಿಗೆ).
ನನ್ನ ಅವರ ಆಲೋಚನಾ ಕ್ರಮಗಳು , ಕೆಲಸ ಮಾಡುವ ವಿಧಾನ ಇಬ್ಬರಿಗೂ ಮೆಚ್ಚುಗೆಯಾಗಿ ದ್ದು ಇದಕ್ಕೆ ಕಾರಣವಿರಬಹುದು . ಮುಂದೆ ಅನೇಕ ಕೆಲಸಗಲ್ಲಿ ಅವರೊಂದಿಗೆ ಕೈ ಜೋಡಿಸಿದ ನನಗೆ ಅವರ ಒಡನಾಟ ಒಂದು ಅಧ್ಬುತ ಜೀವನ ಪಾಠ .

ಆಸ್ಪತ್ರೆಯಲ್ಲಿ ಊಟಮಾಡಿಸಿ ಬಾಯಿತೊಳೆದು ಬರುತ್ತಿದ್ದದ್ದು ಸೇವೆಮಾಡಲು ಒಂದು ನನಗೆ ಸಿಕ್ಕಿದ್ದ ಒಂದು ಅವಕಾಶ . 




2004 ರ (ಸೆಪ್ಟೆಂಬರ್ -ಅಕ್ಟೋಬರ್?) ಒಂದುಸಂಜೆ
-----------------------------------------------------------

ಮೇಲೆ ತಿಳಿಸಿದ ಸಮಯದಲ್ಲಿ ನಾನು ನನ್ನ ಅಣ್ಣನ ಕುಟುಂಬದೊಂದಿಗೆ ಗೋವಾ ಪ್ರವಾಸದಲ್ಲಿದ್ದ ಸಮಯ ವದು . ಯಾವುದೇ ಊರಿನಲ್ಲಿದ್ದರೂ ರಾತ್ರಿ ಒಮ್ಮೆ H N ಗೆ ಫೋನು ಮಾಡಿ ಆರೋಗ್ಯ ವಿಚಾರಿಸುವುದು ನನ್ನ ನಿತ್ಯದ ವಾಡಿಕೆಯಾಗಿತ್ತು . ಅದರಂತೆ ಗೋವಾ ದಿಂದಲೇ ಫೋನು ಮಾಡಿದೆ . ಆಕ್ಷಣಕ್ಕೆ ಫೋನು ಎತ್ತಿದ H N ಕೂಡಲೇ " ಕಮಲಾ ಇವತ್ತು ಮೀಟಿಂಗ್ನಲ್ಲಿ(Society A G M ) ನಾನು ಬಿಟ್ಟು ಬಿಡುತ್ತೇನೆಂದು ಹೇಳಿಬಿಟ್ಟೆ ". ಎಂದರು . " ಆಯಿತು ಅದರಬಗ್ಗೆ ಆಮೇಲೆ ಮಾತಾಡೋಣ ಈಗ ನಿಮ್ಮ ಆರೋಗ್ಯ ಹೇಗಿದೆ ಎಂದೇ?"
"ಪರವಾಗಿಲ್ಲ". ಎಂದರು .
ಬೆಂಗಳೂರಿಗೆ ಬಂಡ ಕೂಡಲೇ ಅವರ ಕೊಠಡಿ ಗೆ ತೆರಳಿದಾಗ ಮತ್ತದೇ ಅಧಿಕಾರ ತ್ಯಜಿಸುವ ಮಾತು . ಆಗ ನಾನು "ಒಳ್ಳೆಯ ಕೆಲಸ ಮಾಡಿದಿರಿ ಸ್ವಾಮೀ , ಒಂದೆರಡು ವರ್ಷ ಮೊದಲೇ ಬಿದಬಾರದಿತ್ತೆ ?" ಎಂದಾಗ , ಈ ಉತ್ತರ ನಿರೀಕ್ಷಿಸಿರದಿದ್ದ H N ಆ ಕೂಡಲೇ " ಅಮ್ಮ ನಾನು ಅಧಿಕಾರದಲ್ಲಿದ್ದರೆ ನಿನಗೆನಮ್ಮ ಹೊಟ್ಟೆಕಿಚ್ಚು ?" ಎನ್ನ ಬೇಕೇ?. " ಹೌದು ಸರ್ , ನೀವು ಇನ್ನೊಂದೆರಡು ವರ್ಷ ಮೊದಲೇ ಬಿಟ್ಟಿದ್ದಾರೆ ಇನ್ನೆರಡು ವರ್ಷ ಹೆಚ್ಚಾಗಿ ಬದುಕುತ್ತೀರಿ ಅದಕ್ಕೇ ಹೇಳಿದೆ . ಎಷ್ಟು ವರ್ಷ ಬೇಕಾದರೂ ಇರಿ ನನಗೇನಾಗಬೇಕು ಎಂದೇ ".

"ಅಧಿಕಾರ ಬಿಟ್ಟ ಮೇಲೆ ಸಮಯ ಹೇಗೆ ಕಳೆಯುತ್ತೀರಿ ?" ಎಂದೆ .
"ಅಮ್ಮ ನಾನು ಎಷ್ಟೋ ವರ್ಷಗಳಿಂದ ಓದುವುದು ನಿಂತು ಹೋಗಿದೆ . ಓದುವುದು ಬೇಕಾದಷ್ಟಿದೆ ನೆಮ್ಮದಿಯಾಗಿ ಕುಳಿತು ಓದುತ್ತೆನೆ". ಎಂದರು .
ಅನಂತರದಲ್ಲಿ ಅಧಿಕಾರ ತ್ಯಜಿಸುವುದನ್ನು ರೆಕಾರ್ಡ್ ಮಾಡಿಸಿದ ಕಿಲಾಡಿ ತಾತ .
ಆದರೆ ಅಧ್ಯಕ್ಷರಾಗಿದ್ದಾಗಲೇ , ದೆಹಾಂತ್ಯವಾಗಿದ್ದು (31-1-2005) ಸಾವು ನಮ್ಮ ಕೈಯ್ಯಲ್ಲಿಲ್ಲ ಎಂಬುದನ್ನು ಸೂಚಿಸುತ್ತದೆ . 



ಸ್ಥೂಲ ಜೀವನ ಚಿತ್ರ
-----------------------
ನರಸಿಂಹಯ್ಯ ನವರಬಗ್ಗೆ ಇನ್ನೇನೂ ಉಳಿದಿಲ್ಲ ಎನ್ನುವಷ್ಟರ ಮಟ್ಟಿಗೆ ಅನೇಕರು ಬರೆದಿದ್ದಾರೆ .
ಆದರೆ ಆ ವ್ಯಕ್ತಿ ಒಂದು ವಿಶ್ವ ಕೋಶ , ಅಕ್ಷಯ ಪಾತ್ರೆ . ಬರೆದಷ್ಟು ಮೊಗೆದಷ್ಟು ವಿಷಯಗಳು ಸಿಕ್ಕುತ್ತಲೇ ಇರುತ್ತವೆ .

ಗೌರಿಬಿದನೂರಿನ ಹೊಸೂರು ಇಲ್ಲಿರುವ ಒಂದೂವರೆ ಚದರದ ಮನೆಯ ವಳಕಲ್ಲ ಪಕ್ಕದಲ್ಲಿ ಹುಟ್ಟಿದ್ದು .
ಎಂಟನೇ ತರಗತಿಗೆ ಶಾಲೆಗೇ ಸೇರಲು ಅಲ್ಲಿನದಲೇ ಕಾಲ್ನಡಿಗೆಯಲ್ಲಿ ಬೆಂಗಳೂರಿಗೆ ಬಂದದ್ದು ಅವರ ಜ್ಞಾನದಾಹ ಹಾಗೂ ಬದುಕು ಗೆಲ್ಲಬೇಕೆನ್ನುವ ಛಲವನ್ನು ಸೂಚಿಸುತ್ತದೆ .

9ನೇ ತರಗತಿಯಲ್ಲಿದ್ದಾಗ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗಾಂಧಿಜಿಯವರನ್ನು ಭೇಟಿ ಮಾಡಿದ್ದು , ಅವರ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಿದ್ದು ಅವರ ಆತ್ಮ ವಿಶ್ವಾಸವನ್ನು ಸೂಚಿಸುತ್ತದೆ .
ಕಾಲೇಜು ಓದುವಾಗ ಸ್ವಾತಂತ್ರ ಚಳುವಳಿಯಲ್ಲಿ ಧುಮುಕಿದರೂ , BSc ಕೊನೆ ವರ್ಷದಲ್ಲಿ ಎಲ್ಲವಿಷಯಗಳ ಪರೀಕ್ಷೆಯನ್ನು ಒಟ್ಟಿಗೆ ಬರೆದು ಪಾಸುಮಾದಿದ್ದು ಮತ್ತೊಮ್ಮೆ ಬದುಕು ಗೆಲ್ಲಲೇ ಬೇಕೆಂಬ ಛಲದ ಸಾಬೀತು ಮಾಡಿದರು . ಈ ಹಂತದಲ್ಲಿ ರಾಮಕೃಷ್ಣ ವಿದ್ಯಾರ್ಥಿ ಮಂದಿರದಲ್ಲಿ ಆಸರೆ ಪಡೆದಿದ್ದ ಅವರು ಆಧ್ಯಾತ್ಮದ ಕಡೆಗೆ ಒಲವು ಬೆಳೆಸಿಕೊಂಡಿದ್ದರು . ಮದುವೆಯಬಗ್ಗೆ ನಿರ್ಲಿಪ್ತರಾಗಿದ್ದರು .
MSc ಪಾಸು ಮಾಡಿ ಕೆಲಸಕ್ಕೆ ಸೇರಿದ್ದು ಜೀವನಕ್ಕೆ ಸ್ವಲ್ಪ ಆಸರೆಯಾಯಿತಾದರೂ , ಮತ್ತೊಮ್ಮೆ ಚಳುವಳಿಗೆ ಧುಮುಕಿದರು .

ನಂತರದ ಹಂತದಲ್ಲಿ ಮತ್ತೊಮ್ಮೆ ನ್ಯಾಷನಲ್ ಕಾಲೇಜಿಗೆ ಕೆಲಸಕ್ಕೆ ಸೇರಿದ ಅವರು ಕಾಲೇಜನ್ನು ಅತೀ ಕಡಿಮೆ ಪಲಿತಾಂಶ ದಿಂದ ರಾಂಕು (rank) ಪಡೆಯುವ ಕಾಲೇಜಾಗಿ ಪರಿವರ್ತಿಸಿದ್ದು ಅವರ ಶೈಕ್ಷಣಿಕ ಶಕ್ತಿ , ಆಡಳಿತಾತ್ಮಕ ಶಕ್ತಿ ,ಮುತ್ತ್ಸದ್ದಿತನ , ಮತ್ತು ದೂರದರ್ಶಿತ್ವವನ್ನು ಬಿಂಬಿಸುತ್ತದೆ .

ತನ್ನ 36ನೇ ವಯಸ್ಸಿನಲ್ಲಿ ಅಮೆರಿಕಾಗೆ ತೆರಳಿ ಓಹಿಯೋ ವಿಶ್ವವಿದ್ಯಾಲಯದಲ್ಲಿ ನ್ಯೂಕ್ಲಿಯಾರ್ ಫಿಸಿಕ್ಸ್ ವಿಷಯದಮೇಲೆ ಸಂಶೋಧನೆ ಮಾಡಿ PhD ಪಡೆದದ್ದು ಅವರರ ಎರಡನೇ ಹಂತದ ಸಾಧನೆಗೆ ನಾಂದಿ ಹಾಡಿತು .

ಅವರು ಅಮೆರಿಕೆಗೆ ತೆರಳುವಾಗ ಏರ್ಪೋರ್ಟ್ ನಲ್ಲಿ ಶಿಷ್ಯರಾದಿಯಾಗಿ ಜನಸಮೂಹ ಬೀಳ್ಕೊಟ್ಟದ್ದು , ಅಷ್ಟುಹೊತ್ತಿಗೆ ಅವರು ಸಂಪಾದಿಸಿದ್ದ "ಆಸ್ತಿ"ಯನ್ನು ಸೂಚಿಸುತ್ತ ದೆ .

ಅಮೇರಿಕೆಯಿಂದ ವಾಪಾಸಾಗುವ ಹೊತ್ತಿಗೆ ಅವರ ಮನೋಭಾವದಲ್ಲಿ ಸಾಕಷ್ಟು ಬದಲಾವಣೆ ಆಗಿತ್ತು .

ಕಾಲೇಜಿನಲ್ಲಿ ಹೆಣ್ಣುಮಕ್ಕಳಿಗೆ ಪ್ರವೇಶಾವಕಾಶ ಮತ್ತು ಬೆಂಗಳೂರು ವಿಜ್ಞಾನ ವೇದಿಕೆಯ ಸ್ಥಾಪನೆ .

ನಂತರದ ದಿನಗಳಲ್ಲಿ ಕಾಲೇಜು ಅದ್ಯಾಪಕರೊಬ್ಬರು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಆಯ್ಕೆಯಾಗಿದ್ದು ಇತಿಹಾಸ . ವಿ. ವಿ. ಯನ್ನು ನಗರದ ಮಧ್ಯಭಾಗದಿಂದ ಹೊರವಲಯಕ್ಕೆ ಸ್ಥಳಂತರ ಗೊಳಿಸಿ ಅದನ್ನು ಕ್ರಿಯಾಶೀಲವನ್ನಾಗಿಸಿದ್ದು ಇಂದಿಗೂ ನೆನಪಿಸಿಕೊಳ್ಳ ಬಹುದಾದ ಸಾಧನೆ .

ಸಾಯಿ ಭಾಭಾ ವಿರುದ್ದ ತಿರುಗಿಬಿದ್ದದ್ದು , ಒಂದು ಕುಂಬಳ ಕಾಯಿ ಕೊಡೆಂದು ಕೇಳಿದ್ದು ಮೂಡನಂಬಿಕೆ ಮತ್ತು ಸಮಾಜದ ಬಗೆಗಿನ ಹೋರಾಟದ ಒಂದು ಅಧ್ಯಾಯವಷ್ಟೇ .

ಹಳ್ಳಿಗಳಲ್ಲಿ ಕಾಲೇಜು ಸ್ಥಾಪನೆ , K R V P ಸ್ಥಾಪಿಸಿ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವದಿಕ್ಕಿನಲ್ಲಿ ಒಟ್ಟು ಕೊಟ್ಟದ್ದು, ಅವರ ಸಮಾಜ ಮುಖಿ ಚಿಂತನೆಗಳು .
ಇದೆಷ್ಟೇ ಅಲ್ಲದೆ ಸಮಾಜದ ಎಲ್ಲ ಕ್ಷೇತ್ರಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದರು . ರಾಜಕಾರಣಿಗಳೊಂದಿಗೆ ಸೂಜಿಗೆ ಮುತ್ತು ಕೊಟ್ಟಂತೆ ಸಂಭಂದ ಇಟ್ಟುಕೊಂಡಿದ್ದು ಅವರ ಮುತ್ಸದ್ದಿತನ ವನ್ನು ಸೂಚಿಸುತ್ತದೆ .
ಅವರ ಆಡಳಿತ ಶೈಲಿಯಂತೂ , ವಿಶಿಷ್ಟವಾದದ್ದು , IIM ನಲ್ಲಿ Dr. H N Stye of Administration ಎಂದು ಒಂದು ಪಾಠ ಸೇರಿಸಬಹುದು . ಸಣ್ಣ ಸಂಸ್ಥೆಗಳ ಆಡಳಿತಕ್ಕೆ ಮಾರ್ಗಸೂಚಿಯಾಗಬಲ್ಲುದು .
ನ್ಯಾಷನಲ್ ಎಜುಕೇಶನ್ ಸೊಸೈಟಿಯ ಅನಭಿಷಿಕ್ತ ದೊರೆಯಾಗಿ ಆಳಿದ್ದು, ಅಲ್ಲೇ ಕಾಲೇಜಿನ ಮೂಲೆಯಲ್ಲಿ ಹಾಸ್ಟೆಲ್ ಕೊಠಡಿಯಲ್ಲಿ ಜೀವಿಸಿದ್ದು ಅವರ ಜೀವನದ ದರ್ಶನವನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಸೂಚಿಸುತ್ತದೆ .
ಇನ್ನು ಪ್ರಶಸ್ತಿ ,ಗೌರವಗಳು ಈ ಲೇಖನದ ಮಿತಿಗೆ ಹೊರತಾಗಿವೆ ಬಿಡಿ .
ಅವರಿಗೆ ಬಂದ ಶಾಲುಗಳನ್ನು ತಮ್ಮ ಸುತ್ತ ಮುತ್ತಲಿನವರಿಗೆ ಕೊಟ್ಟು ಮಿಕ್ಕಿದ್ದನ್ನು , ಒಂದು ದಿನ ರಾತ್ರಿ ಪರಿಚಯಸ್ಥರ ಕೈಗೆ ಕೊಟ್ಟು ಫುಟ್ಪಾತ್ ನಲ್ಲಿ ಮಲಗಿರುವ ನಿರ್ಗತಿಕರಿಗೆ ಹೊದೆಸಿಬರಲು ಹೇಳಿದ್ದರು !!!!!!!!!!!

ಬರೆಯುತ್ತಾ ಹೋದರೆ ಲೇಖನ ಮುಗಿಯುವುದಿಲ್ಲ .

ಇಂದು ಅವರ ಜನ್ಮದಿನವಾಗಿದ್ದು ಅವರಂತಹ ನಾಯಕರುಗಳು ಸಮಾಜಕ್ಕೆ ಪ್ರಸ್ತುತ ಮತ್ತು ಬೇಕು ಎಂದು ಹೇಳುವುದು ತೋರಿಕೆಯ ಮಾತಲ್ಲ ಬದಲಿಗೆ ಅವರನ್ನು ಕಂಡು ಅವರ ಒಡನಾಡಿಗಳಾಗಿದ್ದ ನಮ್ಮ ಅನುಭವದ ಮಾತು .

Saturday 1 June 2013

ನಾನು ಅಂಬಿಕ ಮತ್ತು ಚಿತ್ರಾನ್ನ .




ನೀನು ಚಿತ್ರಾನ್ನ ಉಪ್ಪಿಟ್ಟು ಎಂದೆಲ್ಲಾ ಬರೆಯಲು ಶುರು ಮಾಡಿದೆಯಾ ? ನಮ್ಮ ಗತಿ ಏನಾಗಬೇಡ ? ಎಂದು ಸಿಟ್ಟಾಗಬೇಡಿ . ಅದಕ್ಕೊಂದು ಕಾರಣ ಇದೆ ಮುಂದೆ ಓದಿ . ಇದರ ಬಗ್ಗೆ ಬಹಳ ಹಿಂದೆಯೇ ಬರೆಯಬೇಕೆಂದು ಕೊಂಡಿದ್ದೆ . ಆದರೆ ಸ್ಯಾಂಡು ಕುಟ್ಟುವ ಕೆಲಸ ನಡೆಯುತ್ತಿತ್ತು . ಇಂದು ಅದಕ್ಕೆ ಬಿಡುವು . ಆದ್ದರಿಂದ ಇದನ್ನು ಬರೆದು ಮುಗಿಸುತ್ತಿದ್ದೇನೆ .

ಅಂಬಿಕ ಮೊದಲಿಗೆ ನನಗೆ PUC ಮತ್ತು BSc ಯಲ್ಲಿ ರಸಾಯನ ಶಾಸ್ತ್ರ ಪಾಠ ಹೇಳಿದ ಮೇಡಂ ,ನಂತರದಲ್ಲಿ ನನ್ನ ಸಹೋದ್ಯೋಗಿ , ಮೂರನೇ ಹಂತದಲ್ಲಿ ಪ್ರಾಂಶುಪಾಲೆಯಾಗಿ ನನಗೆ ಅಧಿಕಾರಿಣಿ . ಆದರೆ ಇವೆಲ್ಲವನ್ನೂ ಮೀರಿದ್ದು ಅವರು (ಆಕೆ!!! ನನಗೆಷ್ಟು ಧೈರ್ಯ ?) ನನ್ನ ಆತ್ಮೀಯ ಸ್ನೇಹಿತೆ .
ನಮ್ಮಿಬ್ಬರ ಸ್ನೇಹದ ಮಾತುಕತೆಗಳು ನಡೆಯುವುದು ನಾನೇನಾದರೂ ಬೆಳಗ್ಗೆ 5 30ಕ್ಕೆ ಪಾರ್ಕಿಗೆ ವಾಕಿಂಗ್ ಹೋದಾಗ . ಅಂಬಿಕ ಒಂದು ದಿನವೂ ವಾಕಿಂಗ್ ತಪ್ಪಿಸುವುದಿಲ್ಲ . ಆದರೆ ನಮ್ಮದು if but ಕಂಡಿಶನ್ ಗೆ ಒಳಪಟ್ಟಿರುತ್ತದೆ ಎನ್ನಿ ,ಏಕೆಂದರೆ ಮಕ್ಕಳಿನ್ನು ಚಿಕ್ಕವರಲ್ಲವೇ? . ನಾನು ಎಂದು ವಾಕಿಂಗ್ ಹೋದರೂ ಅಂದು, ಇಂದು ನೀನು ಸಿಕ್ಕುತ್ತೀಯ ಎಂದುಕೊಂಡು ಮನೆಯಿಂದ ಬಂದೆ ಎಂದು ಹೇಳಿಯೇ ಆತ್ಮೀಯವಾಗಿ ಸ್ವಾಗತಿಸುವ ಅಂಬಿಕಾ ಮೇಡಂ ಆಮೇಲೆ ಒಂದು ಗಂಟೆ ಹೇಗೆ ಹೋಯಿತು ಇಬ್ಬರಿಗೂ ತಿಳಿಯುವುದಿಲ್ಲವೆನ್ನಿ .
ನ್ಯಾಷನಲ್ ಕಾಲೇಜಿನಿಂದ ಒಂದಿಡೀ ವಿಶ್ವ ನಮ್ಮ ಮಾತುಕತೆಯಲ್ಲಿ ಮುಳುಗಿಹೋಗುತ್ತದೆ .

ಅಂಬಿಕಾ ಮೇಡಂ ವಿಶಿಷ್ಟ ವ್ಯಕ್ತಿತ್ವದ ಮಹಿಳೆ . ಮೊದಲಿಗೆ ಅಪ್ಪಟ ಗೃಹಿಣಿ , ನಂತರದಲ್ಲಿ ಅಧಿಕಾರಿಣಿ , ಬಿಡುವಿನವೇಳೆಯಲ್ಲಿ ವಿಜ್ಞಾನ ಮತ್ತು ಸಾಹಿತ್ಯ ಎರಡನ್ನೂ ಬರೆಯುತ್ತಾರೆ . ಕನ್ನಡ ಇಂಗ್ಲಿಷ್ ಎರಡೂ ಭಾಷೆಯಮೆಲಿನ ಅವರ ಹಿಡಿತ ಬಹಳ ಚೆನ್ನಾಗಿದೆ . ಅವರ ಸಮಗ್ರ ಬರವಣಿಗೆಯ ಮೂರು ಸಂಪುಟಗಳು ಬಿಡುಗಡೆಗೆ ಸಿದ್ದವಾಗಿವೆ . ಅಂಬಿಕ ಮೇಡಂ ಅತ್ಯುತ್ತಮ ಅಡುಗೆಕಾರ್ತಿ . ಅವರ ಕೈಯ್ಯಲ್ಲಿನ ಅಡುಗೆರುಚಿ ತಿಂದವರಿಗೆ ಗೊತ್ತು . ಅವರು ಏನೇ ವಿಶೇಷ ಅಡುಗೆ ಮಾಡಿದರೂ ಡಬ್ಬಿಯಲ್ಲಿ ತಂದು ಚೇಂಬರಿಗೆ ಕರೆದು (ಬಿಡುವಿನ ವೇಳೆಯಲ್ಲಿ) ಮಕ್ಕಳಿಗೆ ತಿನ್ನಿಸುವಂತೆ ನನಗೆ ಕೊಡುವ ಅಂಬಿಕ ಮೇಡಂ, ನಂತರ ಅದರಬಗ್ಗೆ ನಮ್ಮಿಬ್ಬರಿಗೂ ಚರ್ಚೆಯಾಗುತ್ತದೆ . ಅದರ technicality, methodology ಎಲ್ಲವೂ ಚರ್ಚೆಯಾಗುತ್ತದೆಯೇನ್ನಿ .

ಇಷ್ಟಕ್ಕೆ ಮುಗಿಯಲಿಲ್ಲ ಅವರ ವಿಶೇಷ , ಎಲ್ಲ ಹಬ್ಬಗಳನ್ನೂ ಸಮರ್ಪಕವಾಗಿ ಮಾಡುವ ಮೇಡಂ ಕಾಲೇಜಿಗೆ ಒಂದು ದಿನವೂ ತಡವಾಗಿ ಬರುವುದಿಲ್ಲ . ಅದು ಸಂಕ್ರಾಂತಿಯ ಸಕ್ಕರೆ ಅಚ್ಚು ಮಾಡುವುದಿರಲಿ , ದಸರಾ ಗೊಂಬೆ ಕೂರಿಸುವುದಿರಲಿ ಎಲ್ಲವೂ ಆಗಬೇಕು . ದಸರಾ ಹಬ್ಬದಲ್ಲಿ ಮನೆಗೆ ಕರೆದು ಉಪಚರಿಸುವ ಅಂಬಿಕಾ ಅವರ ಉತ್ಸಾಹಕ್ಕೆ ಅವರೇ ಸಾಟಿ . ಮೇಡಂ ಇಬ್ಬರು ಯಶಸ್ವೀ ಗಂಡುಮಕ್ಕಳ ತಾಯಿ . ಸಕ್ಕರೆ ಗೊಂಬೆಯಂತ ಮಾಡ್ರನ್ ಸೊಸೆಯಂದಿರು . ಆ ಸೊಸೆಯಂದಿರನ್ನು ultra modern ಬುದ್ದಿವಂತಿಕೆಯಿಂದ ಒಲಿಸಿಕೊಂಡಿರುವ ಅತ್ತೆ . ಎಲ್ಲರನೂ ವಿದೇಶಕ್ಕೆ ದತ್ತು ಕೊಟ್ಟಿದ್ದಾರೆನ್ನಿ .
ಇಂತಿಪ್ಪ ಮೇಡಂ ಈಗ್ಗೆ ಕೆಲದಿನಗಳ ಹಿಂದೆ ಫೋನು ಮಾಡಿ ಚೇಂಬರಿಗೆ ಬಾ ಎಂದರು . ಆಯಿತು ಎಂದು ಹೋದೆ . ಆಗ " ಕಮಲಾ ಮನೆ ಕ್ಲೀನು ಮಾಡುವಾಗ 1886 ರರಲ್ಲಿ ಪ್ರಿಂಟು ಆಗಿರುವ ಅರಮನೆಯ ಪಾಕಶಾಸ್ತ್ರದ ಪುಸ್ತಕ ಸಿಕ್ಕಿದೆ ಯಾರಿಗೆ ಕೊಡುವುದು ಎಂದು ಬಹಳ ಯೋಚಿಸಿದೆ , ನಿನಗೇ ಕೊಡಬೇಕು ಅನ್ನಿಸಿತು ಸ್ವೀಕರಿಸುವೆಯಾ?" ಎಂದಾಗ ಬಹಳ ಸಂತೋಷವಾಗಿ ಸಮ್ಮತಿಸಿದ್ದೆ . ದಾಕ್ಷಾಯನಮ್ಮನ ಗೊಂಬೆ ಗಳು , ಅಯ್ಯಂಗಾರ್ ಅಜ್ಜಿಯ ಈಳಿಗೆಮಣೆ ಗಿಫ್ಟು ಪಡೆದ ನನಗೆ ಇದೇನು ಹೊಸದೆನ್ನಿಸಲಿಲ್ಲ .(ಇದರಬಗ್ಗೆ ಮತ್ತೊಮ್ಮೆ ಬರೆಯುವೆ) ಈ ಪ್ರೀತಿ ಯಾರಿಗುಂಟು ಯಾರಿಗಿಲ್ಲ ಎಲ್ಲಾ ನಿಮ್ಮ ಆಶೀರ್ವಾದ ಎಂದು ಸ್ವೀಕರಿಸಿ ಇತ್ತುಕೊಳ್ಳುತ್ತೇನೆನ್ನಿ . (ನನ್ನ ಗಂಡ ಊರ ಕಸವೆಲ್ಲಾ ನಿನಗೆ ಗಿಫ್ತುಗಳೋ , ಎಂದು ಬೈದರೂ ,ಆ ಗಿಫ್ಟಿನ ಹಿಂದಿರುವ ಪ್ರೀತಿಯ ಆರ್ದ್ರತೆಯಿಂದ ಅವುಗಳನ್ನು ಸ್ವೀಕರಿಸುತ್ತೇನೆ ).

ಮಾರನೇ ದಿನ ಕರೆದು, ಮನೆಯಿಂದ ತಂದ ಪುಸ್ತಕ ನೀಡಿದ ಅಂಬಿಕಾ ಮೇಡಂ, ಇದರಲ್ಲಿರುವ ಅಡುಗೆ ಮಾಡಿದಾಗ ನನಗೆ ತಪ್ಪದೇ ತಲುಪಿಸಬೇಕೆಂದು ಕಂಡಿಶನ್ ಹಾಕಿದರು . ಆಯಿತು ಎಂದು ಹೇಳಿ ಮನೆಗೆ ತಂದೆ . ಪುಸ್ತಕ ಬಹಳ ಚೆನ್ನಾಗಿದೆ . ಅನ್ನ ಮಾಡುವ ವಿಧಾನನ್ನೇ ಹತ್ತಾರು ತರಹ ವರ್ಣಿಸಿದ್ದಾರೆ . ಸಾರುಗಳು , ಬಾತುಗಳು ತರಹೇವಾರಿ ಅಡುಗೆಯ ಲೋಕವೇ ಇದರಲ್ಲಿದೆ . ಈ ಪುಸ್ತಕ ಮನೆಗೆ ಬರುವುದಕ್ಕೂ ತೋತಾಪುರಿ ಮಾವಿನಕಾಯಿ ತರುವುದಕ್ಕೂ ಸರಿಹೋಯಿತೆನ್ನಿ . ಆಗ ಈ ಬಾರಿ ಈ ಪುಸ್ತಕದ ಮೆಥಡ್ ನಲ್ಲಿ ಚಿತ್ರಾನ್ನ ಮಾಡೋಣವೆಂದು ಮಾಡಿದೆ ಚೆನ್ನಾಗಿ ಆಗಿತ್ತು . ಅಂಬಿಕ ಮೇಡಂಗೆ ತಲುಪಿಸುವುದನ್ನು ಮರೆಯಲಿಲ್ಲವೆನ್ನಿ . ಮತ್ತೊಂದು ದಿನ ಈ ಪುಸ್ತಕದ ಬಗ್ಗೆಯೇ ತಿಳಿಸುತ್ತೇನೆ . ಏಕೆಂದರೆ ಅದರಲ್ಲಿನ ವಿಧಾನಗಳು ನಿಜಕ್ಕೂ ಚೆನ್ನಾಗಿವೆ . ನಾವೂ ರಾಜ ಭೋಜನವನ್ನು ಸವಿಯೋಣ ಅಲ್ಲವೇ?
ಕಮಲಾ
INSPIRE Oct.2012, National College Basavanagudi.
In the capacity of ORGANISING SECRETARY.

Wednesday 29 May 2013

ನಮ್ಮಪ್ಪನ ಊರು ಹಾವೇರಿ ಜಿಲ್ಲೆಯ ಹರವಿ

ವರದಾ ನದಿ ದಂಡೆಯ ಮೇಲಿರುವ ಸಣ್ಣ ಹಳ್ಳಿ "ಹರವಿ". reference ಹೇಳುವುದಾದರೆ ಬಂಕಾಪುರದ ಪಕ್ಕದ ಹಳ್ಳಿ . ನಮ್ಮಪ್ಪ 1940 ರ ದಶಕದಲ್ಲೇ ಉದರನಿಮಿತ್ತ ಉದ್ಯೋಗವನ್ನರಸಿ ಊರು ಬಿಟ್ಟರು . transferable ಕೆಲಸದಲ್ಲಿದ್ದುದರಿಂದ ಊರೂರು ಸುತ್ತಿ ಕೊನೆಗೆ ಬೆಂಗಳೂರಿನಲ್ಲಿ ನೆಲೆನಿಂತರು .

ನಾನು 7ನೇ ತರಗತಿಯಲ್ಲಿದ್ದಾಗ ನಮ್ಮಮ್ಮನ ಜೊತೆ ಹೋಗಿ 15 ದಿನ ಇದ್ದದ್ದು ಬಿಟ್ಟರೆ ಅಂತರ ಇಷ್ಟು ಸುಧೀರ್ಘ ವಾಗಿ ಎಂದೂ ಇರಲಿಲ್ಲ . ಆದರೆ ವರ್ಷಕ್ಕೆ ಮೂರ್ನಾಲ್ಕು ಬಾರಿ Visiting Professor ಕೆಲಸ ಮಾಡಿಕೊಂಡಿದ್ದೇನೆ .


ಆದರೆ ಈಗ ಅಲ್ಲಿ ನದಿ ಒಣಗಿ ಹೋಗಿದೆ . ನಾನು ಚಿಕ್ಕವಳಿದ್ದಾಗ ಬೇಸಗೆಯಲ್ಲೂ ಸಣ್ಣಗೆ ಹರಿಯುತ್ತಿತ್ತು .
ದಿನವೂ ಬಟ್ಟೆ ಹೊಗೆಯುವವರ ಜೊತೆ ಹೋಗಿ ನೀರಲ್ಲಿ ಕಾಲಾಡಿಸಿಕೊಂಡು ಕುಳಿತುಕೊಳ್ಳುತ್ತಿದ್ದುದು ಹಸಿರಾಗಿರುವ ನೆನಪು .ಹಚ್ಹ ಹಸುರಿನ ಹೊಲಗಳು, ಅಲ್ಲಿನ ನವಿಲುಗಳು ಕಣ್ಣ ಮುಂದೆ ಬಂದಂತಾಗುತ್ತಿದೆ .
ಹೊಲದಿಂದಬರುವಾಗ ಶೇಂಗಾ ಕಿತ್ತು ತಂದು ಮನೆಯಲ್ಲಿ ಬೇಯಿಸಿ ತಿಂದದ್ದು ಎಲ್ಲಾ ನಿನ್ನೆ ಮೊನ್ನೆ ಆದಂತಿದೆ. .
ಪಕ್ಕದಲ್ಲಿ ವರದ - ಧರ್ಮ ನದಿ ಸೇರುವ ಕೂಡಲ ಇದೆ .ಇಲ್ಲಿ ನಾವು ಬೆಂಗಳೂರಿನಿಂದ ಬಂದಿದ್ದೇವೆಂದು ನಮ್ಮ ಜೊತೆಗೆ ಎಲ್ಲರೂ ಬಂದು ರೊಟ್ಟಿ ಗಂಟು, ಹಿಟ್ಟಿನ ಪಲ್ಯೆ , ಬೇಳೆ ಪಲ್ಯೆ , ಪಚಡಿ , ಇತ್ಯಾದಿಗಳನ್ನು ಕೂಡಿ ತಿಂದದದ್ದು ಇನ್ನು ಹಸಿರಾದ ನೆನಪು .

ಇದನ್ನು ನೆನಪು ಮಾಡಿಕೊಳ್ಳಲು ಕಾರಣ 27 -5-2013(ನಿನ್ನೆ) ಅಲ್ಲಿ , ನಮ್ಮಪ್ಪಾಜಿಯ ತಮ್ಮನ ಮಗ ಶಿವಲಿಂಗಪ್ಪನ ಮಗಳು ಗೀತಳ ಮದುವೆಗಾಗಿ ತೆರಳಿದ್ದೆವು . ಶಿವಲಿಂಗಪ್ಪ ಬೆಂಗಳೂರಿನಲ್ಲಿ ನಮ್ಮೆಲ್ಲರೊಂದಿಗೆ ಹೈಸ್ಕೂಲ್ ಓದಿದ್ದು . junior ಎರೆಸೀಮೆ ತಂಡಗಳೊಂದಿಗೆ senior ಎರೆಸೀಮೆ ಕುಟುಂಬದ ನಾವೆಲ್ಲರೂ ಸೇರಿದ್ದು ಬಹಳ ಸುಂದರ ಸಮ್ಮಿಲನವಾಗಿತ್ತು .

ಅಲ್ಲಿನ ಬತ್ತಿಹೋದ ಹೊಳೆ , ಹೊಲ ಎಲ್ಲವನ್ನು ನನ್ನ ಮಗಳ ಕೈ ಹಿಡಿದುಕೊಂಡು ತೋರಿಸಿಕೊಂಡು ಕಾಮೆಂಟರಿ ಹೇಳುತ್ತಾ ಸಾಗಿದ್ದು ನನ್ನಿಂದ ನನ್ನ ಮಗಳಿಗೊಂದು nostalgic ಪಾಠ , ಆಕೆ ಸುಮ್ಮನೆ ಬಂದದ್ದು ನನ್ನ ಪುಣ್ಯ .
Amma enough Amma shall we go back ಎಂದು ಹೇಳದ ರೀತಿಯಲ್ಲಿ ಕರೆದುಕೊಂಡು ಹೋಗಿದ್ದು 24 ವರ್ಷದ teaching experiansu!!!!!!!!!!!!.


ಟ್ರಾನ್ಸ್ಲೇಷನ್ ಮತ್ತು ನಾನು

ಟ್ರಾನ್ಸ್ಲೇಶನ್  ಮಾಡುವುದೆಂದರೆ ಮನೆ ರಿಪೇರಿ ಕೆಲಸ ಮಾಡಿಸಿದಂತೆ . ಅಥವಾ ಇನ್ನೊಬ್ಬರ ಬಟ್ಟೆಯನ್ನು ಹಾಕಿಕೊಂಡು ಅಲ್ತ್ರೆಶನ್ ಮಾಡಿದಂತೆ . ಕೆಲವು ಭಾರಿ ಅಲ್ತ್ರೆಶನ್ ಬಹಳ ಚೆನ್ನಾಗಿ  ಫಿಟ್ ಆಗಿ ಹೊಸಬಟ್ಟೆಗಿಂತ  ಚೆನ್ನಾಗಿ ಕಾಣಬಹುದು . ಮತ್ತೆ ಕೆಲವುಬಾರಿ ಇದು ಅಲ್ತ್ರೆಶನ್ ಅಂತ ಗೊತ್ತಾಗಿ ಬಿಡುತ್ತದೆ . ಯಾವುದಕ್ಕೂ ಟೈಲರ್  ಹಾಗು ಬಟ್ಟೆಯ ಸೈಜಿನ ಮೇಲೆ ಅವಲಂಬನ  ವಾಗಿರುತ್ತದೆ .
ಟ್ರಾನ್ಸ್ಲೇಷನ್  ಕೆಅಸ ನಡೆಯುತ್ತಿದೆ . ದಿನವೆಲ್ಲಾ ಕೂತರೂ ಎರಡು ಪೇಜು ಮುಗಿಯುವುದಿಲ್ಲ . ಇದು ಎಲ್ಲರಿಗೂ  ಹೀಗೆನಾ? ಗೊತ್ತಿಲ್ಲ . .....
ಬಲ್ಲವರು ಹೇಳಬಹುದು .

 ಕೂತು ಕೂತು ಸಾಕಾಯಿತು ಅದಕ್ಕೇ ಈ ಪೋಸ್ಟು .
 

Thursday 23 May 2013

ಮಂಜುಳೆಯ ಮನೆ ಗೃಹಪ್ರವೇಶ .

    ಈಗ್ಗೆ ಎರಡುದಶಕಗಳ ಹಿಂದೆ ತಿಪಟೂರಿನಿಂದ  ಬೆಂಗಳೂರಿಗೆ ವಲಸೆ ಬಂದು ನೆಲೆನಿಂತವರಲ್ಲಿ ಮಂಜುಳಾ - ಪರಮೇಶ್ ಕುಟುಂಬವೂ ಒಂದು . ಇಂದು ಅವರು ಕಟ್ಟಿದ ಮನೆಯ ಗೃಹಪ್ರವೇಶ . ಎಲ್ಲ ಕೆಲಸ ನಿಲ್ಲಿಸಿ  ಅಲ್ಲಿಗೆ ಹೋಗಿಬಂದೆ . ನನ್ನ ಹಳೆಯ ಕಾಲೇಜಿನ ಸಹೋದ್ಯೋಗಿಗಳು ಅನೇಕ ಸ್ನೇಹಿತರೂ ಅಪ್ತೆಷ್ಟರು ಸಿಕ್ಕಿ ಸಂತೋಷವಾಯಿತು , ಹಾಗೆಯೇ ಮನಸ್ಸು ಫ್ಲಾಶ್ ಬ್ಯಾಕ್ ಗೆ ಜಾರಿತು.

  ಎರಡು ದಶಕಗಳ ಹಿಂದೆ ತಿಪಟೂರಿನ ಮದುವೆಮನೆಯಲ್ಲಿ  ಅಲಂಕಾರಭೂಶಿತೆಯಾಗಿದ್ದ ಮಂಜುಳೆಯನ್ನು ನೋಡಿದ ಪರಮೇಶ್ ಆಕೆಯ ಸ್ನಿಗ್ದ ಸೌಂದರ್ಯಕ್ಕೆ clean bold ಆಗಿಬಿಟ್ಟಿದ್ದರು . ಆ ಕೂಡಲೆ ಆಕೆಯಬಗ್ಗೆ ವಿಷಯ ಸಂಗ್ರಹಿಸಿದ ಪರಮೇಶ್ ತತ್ಕ್ಷಣ ಕಾರ್ಯಪ್ರವೃತ್ತರಾಗಿ ನಂಜುಂಡಪ್ಪ (ಮಂಜುಳೆಯ  ತಂದೆ )ನವರ ಸ್ನೇಹಿತರೊಬ್ಬರನ್ನು ಕರೆದುಕೊಂಡು ಒಂದೆರಡು ದಿನದಲ್ಲೇ ಮಂಜುಳೆಯ ಮನೆಗೆ ಹಾಜರಾಗಿ ನಿಮ್ಮ ಮಗಳನ್ನು ನನಗೆ ಕೊಡುವಿರಾ? ಎಂದು ಕೇಳಿಯೇ ಬಿಟ್ಟರು .

ಹುಡುಗನ ಬಗ್ಗೆ ಅಲ್ಲಿ  ಇಲ್ಲಿ ವಿಚಾರಿಸಿದ ನಂಜುಂಡಪ್ಪ ನವರು , ಮಗಳನ್ನು ಕೊಡಲು ಮನಸ್ಸು ಮಾಡಿದರು . ಆಗಿನ್ನೂ ಪರಮೇಶ್ ಸಣ್ಣ ಸರ್ಕಾರಿ ನೌಕರಿಯಲ್ಲಿದ್ದರು .( ಇಂದು ದೊಡ್ಡ ಅಧಿಕಾರಿ, ನನ್ನ ದೊಡ್ಡಣ್ಣ ನ  ಇಲಾಖೆಯಲ್ಲಿ!!). BSc, MSc ಎರಡೂ ಪರೀಕ್ಷೆಯನ್ನು  rank ಪಡೆದು ಪಾಸು ಮಾಡಿದ್ದ ಹಳ್ಳಿಯ ಹುಡುಗ ಪರಮೇಶನ ರೂಪವನ್ನಾಗಲಿ ಅಂತಸ್ತನ್ನಾಗಲಿ ನಂಜುಂಡಪ್ಪನವರು ಪರಿಗಣಿಸಿದ್ದರೆ ಬಹುಶಹ ಮಗಳನ್ನು ಕೊಡುತ್ತಿರಲಿಲ್ಲವೇನೋ ?
ಆದರೆ ಸಗುಣ ಸಂಪನ್ನನಾಗಿದ್ದ ಪರಮೇಶನ ಗುಣವೊಂದನ್ನೇ ನಂಜುಂಡಪ್ಪನವರು ಪರಿಗಣಿಸಿದ್ದು ಇಂದಿನ ತಂದೆ ತಾಯಿಯರಿಗೆ ಮಾದರಿ ಯಾಗ ಬಹುದು .

  ಮದುವೆಯ ನಂತರ ಬೆಂಗಳೂರಿಗೆ ಬಂಡ ಮಂಜುಳಾ ಕೆಲಸಕ್ಕೆ ಸೇರಿದ್ದು S J R ಕಾಲೇಜಿಗೆ .
ಹೊಸ ಸಂಸಾರ, ಅದಾಗ ತಾನೆ MSc ಮುಗಿಸಿದ್ದ ಮಂಜುಳಾ ನೇರವಾಗಿ  college to kitchen ಗೆ  ಬಂದವಳಾಗಿದ್ದಳು .  Staff Room ನಲ್ಲಿ ನಾನು, ಸಿದ್ದಲಿಂಗಮ್ಮ, ಸಂಧ್ಯಾ ಎಲ್ಲರೂ ಆಕೆಗೆ ದಿನಕ್ಕೊಂದು ಅಡಿಗೆ ಹೇಳಿಕೊಟ್ಟು ಮನೆಗೆ ಕಳಿಸುತ್ತಿದ್ದೆವು . ಮನೆಯಲ್ಲಿ ನಡೆದ ಆ ಪ್ರಯೋಗಕ್ಕೆ ಪರಮೇಶ್ ಮೊದಲ taster . ಒಂದು ದಿನವೂ ಹೆಂಡತಿಯ ಅಡುಗೆ ಬಗ್ಗೆ complaint ಮಾಡದ ಪರಮೇಶ್ ನಿಜಕ್ಕೂ ದೊಡ್ಡ ಮನುಷ್ಯ . ಇಂದು ಮಂಜುಳಾ 50 ಜನರಿಗೆ ರುಚಿಕಟ್ಟಾದ ಅಡುಗೆ ಮಾಡಬಲ್ಲಳು , ಇದು ಆಕೆ ಗೆದ್ದ ಚಾಲೆಂಜ್ .

   ಸುಂದರಿಯೂ  ಬುದ್ದಿವಂತೆಯೂ ಆದ ಮಂಜುಳಾ ಚೆನ್ನಾಗಿ ಓದುವ ಮುದ್ದಾದ ಮಗ ಮತ್ತು ಮಗಳ ತಾಯಿ . .ಅತ್ತೆಯ ಜೊತೆ ಸೊಸೆಯಾಗಿ ಹೊಂದಿಕೊಂಡು ನಡೆದಿರುವ ಈಕೆ ಬೆಳೆದ ಮನೆ ಕೊಟ್ಟ ಮನೆ ಎರಡನ್ನು ನಿಭಾಯಿಸಿದಳು . PhD ಮಾಡುವ  ತಾಕತ್ತು ಆಸೆ ಎಲ್ಲ ಇದ್ದಾಗ್ಯೂ ಮನೆಗೆ ಕಷ್ಟವಾಗುವುದೆಂದು ಓದನ್ನು ನಿಲ್ಲಿಸಿ ಸಂಸಾರದಲ್ಲಿ ಲೀನವಾದಳು .

   ಇಂದು ಅವರ ಮನೆಯಲ್ಲಿ ಮಂಜುಳೆಯ ತಂದೆ ಅಕ್ಕಂದಿರು ಅಣ್ಣ ಎಲ್ಲ ಸಿಕ್ಕಿದ್ದರು . ಪರಮೇಶ್ ಅವರ ತಾಯಿ ಯೂ ಸಿಕ್ಕಿದರು ." ಅಮ್ಮ ಮಗ ಸೊಸೆ ಮನೆಕಟ್ಟಿದರು ಬಹಳ ಸಂತೋಷವಾಯಿತು "ಎಂದು ನಾನು ಅಂದಾಗ, ಆ ಮುಗ್ದ, ವಿದವೆಯದ, ಅನಕ್ಷರಸ್ತ ಹಳ್ಳಿಯ ಹೆಂಗಸಿನ ಕಣ್ಣಂಚಿನ ಹೊಳಪು ಗುರುತಿಸುವವರಿಗೆ ಮಾತ್ರ ಗೊತ್ತಾಗುತ್ತಿತ್ತು .
   ದಾಂಪತ್ಯದ ಯಶಸ್ಸು ಹಣ ಅಂತಸ್ತು ಅಥವಾ ರೂಪದಲ್ಲಿಲ್ಲ . ಬದಲಿಗೆ ಬದುಕನ್ನು ಕಟ್ಟಿಕೊಳ್ಳುವ ಪರಿಯಲ್ಲಿದೆ ಎಂಬುದಕ್ಕೆ ಮಂಜುಳಾ - ಪರಮೇಶ್ ಒಂದು ಉದಾಹರಣೆಯಷ್ಟೇ . ಅವರಿಗೆ ಒಳ್ಳೆಯದಾಗಲಿ
ಎಂದು ಮತ್ತೊಮ್ಮೆ ಹಾರೈಸುತ್ತೇನೆ .



Tuesday 7 May 2013

ತಾರಾಲಯ ಸಮ್ಮರ್ ಕ್ಯಾಂಪ್ ಮತ್ತು ನಾನು

ಇಂದು ಸೆಂಟ್ರಲ್ ಬೆಂಗಳೂರಿನ ದ್ರೈವ್ ಗೆ ಕೊನೆಯದಿನ . ರಸ್ತೆಯಲ್ಲಿ ಹೋಗುವಾಗ ರವಿಂದ್ರಕಲಾಕ್ಷೇತ್ರ , ಕಾರ್ಪೋರೇಶನ್ ಕಟ್ಟಡ , ಹಡ್ಸನ್ ಸರ್ಕಲ್ , ಮೈಸೂರ್ ಬ್ಯಾಂಕ್ , ಯೂನಿವರ್ಸಿಟಿ ಲಾ ಕಾಲೇಜು ,ಬಲಗಡೆ ಸೆಂಟ್ರಲ್ ಕಾಲೇಜು , ಅರ್ ಸಿ ಕಾಲೇಜು ,ಚಾಲುಕ್ಯ ಹೋಟೆಲ್ , ಬಸವಭವನ , ಬಸವೇಶ್ವರರ ಪ್ರತಿಮೆ , ದೂರದಲ್ಲಿ ರಾಜಭವನ , ವಿಧಾನಸೌಧ ಎಲ್ಲವನ್ನು ಕಂಡು ನನ್ನ1988 - 89ರ MSc ಓದುವ ದಿನಗಳು ನೆನಪಾದವು .
ಈ ಮದ್ಯೆ "ಕಾರ್ಲ್ ಟನ್ " ಹೌಸ್ ಬಳಿ(ಮಹಾರಾಣಿ ಕಾಲೇಜು ಪಕ್ಕ) 90 ಸೆಕಂಡುಗಳ ಕಾಲ ಸಿಗ್ನಲ್ ಬಿದ್ದಿತು . ಗಾಡಿ ಆಫ್ ಮಾಡಿ ಕತ್ತೆತ್ತಿ ರಸ್ತೆಯನ್ನೊಮ್ಮೆ ನೋಡಿದೆ ಆಹಾ ಎಡ ಬಲ ಗಳಲ್ಲಿದ್ದ ಮರಗಳು ಮೈ ತುಂಬಾ ಬಣ್ಣ ಬಣ್ಣದ ಹೂಗಳನ್ನು ಹೊತ್ತು ನಿಂತಿದ್ದನ್ನು ನೋಡಿ ಮನದುಂಬಿ ಬಂದಿತು . ಸಿಗ್ನಲ್ ಬಿದ್ದಿದ್ದನ್ನು ಪಾಸಿಟಿವ್ ಆಗಿ ಉಪಯೋಗಿಸಿದ ಧನ್ಯತಾ ಭಾವ ಮೂಡಿತು .
ಇನ್ನು ವಾಪಾಸು ಬರುವಾಗ ಶೇಷಾದ್ರಿ ರಸ್ತೆಯ ಕಾಲೆಜುಶಿಕ್ಷಣ ಇಲಾಖೆ , U V C E ಇಂಜಿನೀರಿಂಗ್ ಕಾಲೇಜು , ರಿಸರ್ವ್ ಬ್ಯಾಂಕ್ , ಬಲಕ್ಕೆ St Mathas ಆಸ್ಪತ್ರೆ , ನನ್ನಪ್ಪನ ಕೊನೆಯ ದಿನಗಳು ಕಳೆದ ಆಸ್ಪತ್ರೆ , ಸಿದ್ದಯ್ಯ ರಸ್ತೆ , ಲಾಲಭಾಗ್ ರಸ್ತೆಯ ಸುಪ್ರಸಿದ್ದ MTR ಇವೆಲ್ಲವೂ ಇತಿಹಾಸದ ಭಾಗವಾದರೆ , ಲಾಲಭಾಗ್ ಪಶ್ಹಿಮ ದ್ವಾರದಲ್ಲಿ ನಿನ್ನೆ ಮೊನ್ನೆ ಓಪನ್ ಆಗಿರುವ "ಮೀರಾ ದೆಲಿಕೆಸಿ " ಅಯ್ಯೋ ಇಲ್ಲಿ ಕಾಪಿ ಕುಡಿಯಬಾರದೆ ಎಂದು ಕರೆದಂತಾಯಿತು . ಆದರೂ ಬೇರೆ ಕೆಲಸ ವಿದ್ದುದರಿಂದ ಮನೆ ಸೇರಿದ್ದಾಯಿತು .
ಒಟ್ಟಾರೆಯಾಗಿ 10 ದಿನಗಳಲ್ಲಿ ನನಗೆ ನೆನಪಿನ ಮೆರವಣಿಗೆ ಮಾಡಿಸಿದ "ತಾರಾಲಯದ" ನನ್ನ ಮಗಳ ಸಮ್ಮರ್ ಸ್ಕೂಲ್ ಗೆ ಧನ್ಯವಾದಗಳು . ಅಯ್ಯೋ ದಿನಾ ಹೋಗಬೇಕಲ್ಲಾ ಎಂದು ಭಾವಿಸಿದ್ದಾರೆ ಈ ನೆನಪಿನ ಮೆರವಣಿಗೆ ನನಗೆ ದಕ್ಕುತ್ತಿರಲಿಲ್ಲ.

ನಿನ್ನೆಯ ವರದಿ:

ಈಗ್ಗೆ 10 ದಿನಗಳಿಂದ ಸೆಂಟ್ರಲ್ ಬೆಂಗಳೂರಿನಲ್ಲಿ ಡ್ರೈವ್ ಮಾದುತ್ತಿದ್ದೇನೆ . ಬಸವನಗುಡಿ ಎಂಬ ಸುಂದರ ಹಸಿರಿನ "ಮಹಾಪ್ರಪಂಚ " ದಿಂದ ಹೊರಬಂದಾಗಲೇ ನಿಜವಾದ ಬೆಂಗಳೂರಿನ ದರ್ಶನವಾಗುವುದು . ಬಸವನಗುಡಿ - ಜೆ ಸಿ ರಸ್ತೆ - ಮೈಸೂರ್ ಬ್ಯಾಂಕ್ - ಪ್ಯಾಲೇಸ್ ರಸ್ತೆ - ಚಾಲುಕ್ಯ ಹೋಟೆಲ್ - ತಾರಾಲಯ - ನೃಪ ತುಂಗರಸ್ತೆ - ಸಿದ್ದಯ್ಯರಸ್ತೆ - ಲಾಲಭಾಗ್ - ಕೃ ಮ್ ಬಿಗಲ್ ರಸ್ತೆ - ವಾಡಿಯರಸ್ತೆ - ಬಸವನಗುಡಿ .
ಈ ಸರ್ಕ್ಯೂಟ್ ಕೇವಲ 9 ಕಿ ಮಿ ಆದರೂ , ಸುಂದರವಾದ ಸರ್ಕ್ಯೂಟ್ . ಚಾರಿತ್ರಿಕವಾದದ್ದು . ಆದರೂ ಎ ಸಿ ಕಾರಿನಲ್ಲಿ ಕೂತು, ಹಾಡುಹಾಕಿಕೊಂಡು ಜುಮ್ಮೆಂದು ಹೋಗುವುದಕ್ಕೂ ಸ್ವಂತ ಡ್ರೈವ್ ಮಾದುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಅನ್ನಿಸಿತು. ಏನೇ ಆಗಲಿ ನಮ್ಮ ಬಸವನಗುಡಿ ಬಂದತಕ್ಷಣ ರಸ್ತೆಯ ಇಕ್ಕೆಲದ ಮರಗಳು " ಸಾಮ್ರಾಟ ಅಶೋಕ ಚಕ್ರವರ್ತಿಯನ್ನು " ನೆನಪಿಸುತ್ತದೆ . ಅದಕ್ಕೆ ಬಸವನಗುಡಿ ರಿಯಲ್ ಎಸ್ಟೇಟ್ ರೇಟು ಆಪಾಟಿ ಹೆಚ್ಚಾಗಿರುವುದು ಅಂತ ಅರ್ಥವಾಯಿತು.
ಈ ಸರ್ಕ್ಯೂಟ್ ಪ್ರಯಾಣ 11 - 12 ಗಂಟೆಯ ಅವಧಿಯಲ್ಲಿ ಕೆವೆಲ 20 ನಿಮಿಷದಲ್ಲಾದರೆ , 1 --2 ಗಂಟೆಯ ಅವಧಿಯಲ್ಲಿ ಸುಮಾರು 90 ನಿಮಿಷಗಳಷ್ಟಾಗುತ್ತದೆ . ಇದು ನನ್ನ 10 ದಿನಗಳ ಡ್ರೈವಿಂಗ್ ನ ಸಂಶೋಧನಾ - ಸಂಖ್ಯಾಶಾಸ್ತ್ರೀಯ
ವಿವರಣೆ .!!!!!!!!!!!!!!!!!!!!!!!!!!

ಡಾ . ಸುಲೋಚನ ಗುಣಶೀಲ ವ್ಯಕ್ತಿಯಲ್ಲ ಶಕ್ತಿ .


    ದಿನಾಂಕ 5 -5 - 2 0 1 3 ರ ರ ಸಂಜೆ ಫೋನ್ ಮಾಡಿದ ದೇವಿಕ ಗುಣಶೀಲ , ನಮ್ಮ ತಾಯಿಯವರ ಸ್ಮರಣಾರ್ಥ ಹೋಟೆಲ್ ಲಲಿತ್ ಅಶೋಕದಲ್ಲಿ 6 - 5 -2013 ರ ರ ಸಂಜೆ BSOG ಒಂದು ಕಾರ್ಯಕ್ರಮ ಏರ್ಪಡಿಸಿದ್ದಾರೆ , ನೀವು ಮಾತನಾಡುವಿರಾ ? ಎಂದು ಕೇಳಿದಾಗ ಸಂತೋಷವಾಗಿ ಒಪ್ಪಿಕೊಂಡೆ .
ದಾ. ಸುಲೋಚನ ಗುನಶೀಲರ ಬಗ್ಗೆ ಮಾತನಾಡುವುದೆಂದರೆ ಮನದುಂಬಿ ಬರುತ್ತದೆ . ನೂರಾರು ಜನ ಮಾತನಾದುವವರಿದ್ದರೂ ನನ್ನ ಭಾಷಣದೊಂದಿಗೆ ನಿನ್ನೆ ರಾತ್ರಿಯ ಕಾರ್ಯಕ್ರಮ ಮುಕ್ತಾಯವಾಯಿತು . ಅದಾಗಲೇ ಒಂಭತ್ತು ಗಂಟೆಯಾಗಿತ್ತು . ಏಕೊ ಬೇಡವೆಂದರೂ ಇಂದು ಸುಲೋಚನ ಪದೇ ಪದೇ ನೆನಪಾಗುತ್ತಿದ್ದಾರೆ . ಆಕೆಯ ವ್ಯಕ್ತಿತ್ವವೇ ಹಾಗಿತ್ತು .

      ಈಗ್ಗೆ ಆರೇಳು ವರ್ಷಗಳ ಹಿಂದೆ ಹಂಪಿ ವಿಶ್ವವಿದ್ಯಾಲಯದ ಮಹಿಳೆ ಮತ್ತು ವಿಜ್ಞಾನ ಎಂಬ ವಿಶ್ವಕೋಶದ ಸಂಭಂದ ನಮ್ಮಿಬ್ಬರ ಸ್ನೇಹ ಶುರುವಾಗಿತ್ತು . ನಾನು ವೈದ್ಯೆಯಲ್ಲದಿದ್ದರೂ ನನ್ನ ಬಗೆಗೆ ಆಕೆ ತೋರಿದ ಅಕ್ಕರೆ ಮತ್ತು ಸೆಳೆತ ನನ್ನನ್ನು ಚಕಿತ ಗೊಳಿಸುತ್ತದೆ . ಅನಂತರದ ದಿನಗಳಲ್ಲಿ ಆಕೆ ನಮ್ಮ ಮನೆಗೂ ನಾನು ಅವರ ಆಸ್ಪತ್ರೆ ಮನೆಗೂ ಹೋಗಿ ಕುಳಿತು ಮನಬಿಚ್ಚಿ ಮಾತನಾಡುವುದು ಸಾಗಿತ್ತು . ಈ ಹಂತದಲ್ಲಿ ಅವರಿಗೆ ನಾನು ಆಟೋಬಯಾಗ್ರಫಿ ಬರೆಯಲು ಸೂಚಿಸಿದೆ ." ಆಗ ಅವರು ನಾನೇನ್ ಮಾಹಾ ಸಾಧನೆ ಮಾಡಿದ್ದೇನೆ ? ಅದೂ ಅಲ್ಲದೆ ನನ್ನ ಬಯಾಗ್ರಫಿ ಯಾರು ಓದುತ್ತಾರೆ ? " ಎಂದೆಲ್ಲ ಹೇಳಿ ತಳ್ಳಿಹಾಕಿಬಿದುತ್ತಿದ್ದರು . ಕೆಲವು ವೇಳೆ ಸಾತ್ವಿಕ ಕಾರಣಗಳಿಗೆ ನಾನೂ ಹಟಮಾರಿಯೇ ಅನ್ನಿ !. ಇಲ್ಲಿಗೆ ಬಿಡದ ನಾನು ಅವರಿಗೆ ಏಳೆಂಟು ಬಯಾಗ್ರಫಿ ಪುಸ್ತಕ ಉದುಗೊರೆನೀಡಿ ಇದನ್ನು ಓದಿ ಆನಂತರ ಬಯಾಗ್ರಫಿ ಬಗ್ಗೆ ಯೋಚನೆ ಮಾಡಿ ಎಂದುಹೇಳಿ ಅವರ ಮನೆಯಿಂದ ಹೊರಟು ಬಂದಿದ್ದೆ . ಇದಾದ ಕೆಲವು ತಿಂಗಳ ನಂತರ ಫೋನ್ ಮಾಡಿದ ಸುಲೋಚನ "ರೀ ಕಮಲಾ ನಾನು ಬರೆಯೋಕೆ ಪ್ರಾರಂಭಿಸಿದ್ದೇನೆ ಎಂದು ಹೇಳಿದರು . ಆಗ ಬಹಳ ಸಂತೋಷಪಟ್ಟ ನಾನು ಒಳ್ಳೆಯದು ಬೇಗ ಬರೆದು ಮುಗಿಸಿ ಎಂದು ಹೇಳಿದೆ . ಅನಂತರ ಕಾರಣಾಂತರಗಳಿಂದ ಅದನ್ನು ನಾನೇ ಬರೆಯುವಂತಾದದ್ದು ದೈವಸಂಕಲ್ಪವಷ್ಟೇ . ಅದಕ್ಕೆ ಆ ಪುಸ್ತಕದಲ್ಲಿ " ಈ ಪುಸ್ತಕವನ್ನು ನಾನು ಬರೆದೆ ಎಂದು ಹೇಳಿದರೆ ಅಹಂಕಾರದ ಮಾತಾದೀತು " ಎಂದು ಸೇರಿಸಿದ್ದೇನೆ .

     ಬರೆಯುವ ಪ್ರಕ್ರಿಯೆ ಪ್ರಾರಂಭವಾದಾಗ ಒಮ್ಮೆ ಫೋನ್ ಮಾಡಿದ ಅವರು " ಮೊದಲ ಕಂತಿನ ಡ್ರಾಫ್ಟ್ ಯಾವಾಗ ಕೊಡುತ್ತೀ" ?
ಎಂದು ಕೇಳಿದರು . ನಾನು ಒಂದು ತಿಂಗಳು ಎಂದು ಹೇಳಿದೆ . ಅಲ್ಲಿಗೆ ಮರೆತೂ ಬಿಟ್ಟಿದ್ದೆ ಅನ್ನಿ !.
ತಿಂಗಳು ತುಂಬಿದದಿನ ಬೆಳಗ್ಗೆ ನನ್ನ ಮೊಬೈಲಿನಲ್ಲಿ ಸದ್ದಾಗಿ ಸುಲೋಚನ ಎಂದು ಹೆಸರು ನೋಡಿದ ಕೂಡಲೆ ನನ್ನ ಬೆವರು ಹರಿದಿತ್ತು . ಫೋನ್ ಎತ್ತಿದ ಕೂಡಲೇ "ಕೆಲಸ ಆಗಿದೆಯಾ ? ನನ್ನ ಡ್ರೈವರ್ ಕಳಿಸುತ್ತೇನೆ ಡ್ರಾಫ್ಟ್ ಕೊಟ್ಟು ಕಳಿಸು ವಿರಾ " ಎಂದಾಗ ಸುಲೋಚನ ಜೊತೆಗೆ ನಾನು ಹೇಗೆ ಕೆಲಸ ಮಾಡಬೇಕೆಂಬುದು ಅರ್ಥವಾಗಿಹೊಗಿತ್ತು . ಡ್ರಾಫ್ಟ್ ತಲುಪಿದ ಕೆಲವೇ ದಿನಗಳಲ್ಲಿ ಅದನ್ನು ಸಂಸ್ಕರಿಸಿ ನನಗೆ ತಲುಪಿಸುತ್ತಿದ್ದ ಆಕೆ ನಾನು ಹೇಗೆ ಕೆಲಸ ಮಾಡಬೇಕೆಂಬುದನ್ನು ಕೃತಿಯಲ್ಲಿ ತೋರಿಸಿ ಬಿಟ್ಟಿದ್ದರು .

   ಪುಸ್ತಕದ ಕೆಲಸಕ್ಕೂ ಮುಂಚೆಯಾಗಲಿ , ಮುಗಿಯುವವರೆಗಾಗಲಿ ,ಅನಂತರವೂ ಆಕೆ ನನ್ನನ್ನು ಕಾಯ್ದಪರಿ ಜೀವನ ಪೂರ್ತಿ ನೆನೆಸಿ ಕೊಳ್ಳುವಂತಾದ್ದು .
ಆಕೆ ಹಾನ್ ಕಾಂಗ್ ಗೆ ಚಿಕಿತ್ಸೆಗೆ ತೆರಳುವಮುನ್ನ ಮನೆಗೆ ಕರೆದು ಉಪಚರಿಸಿ ಬಿಗಿದಪ್ಪಿದ ಸುಲೋಚನ " ಕಮಲಾ ನನ್ನ ಕೊನೆಯ ದಿನಗಳನ್ನು ಬಹಳ interesting ಆಗಿ ಕಳೆಯುವಂತೆ ಮಾಡಿದೆ . ಈ ಪುಸ್ತಕ ರಚನೆಯಲ್ಲಿ ತೊಡಗದಿದ್ದರೆ ನಾನು ಹೇಗೆ ಸಮಯ ಕಳೆಯುತ್ತಿದ್ದೇನೋ ಗೊತ್ತಿಲ್ಲ ". ಎಂದು ಹೇಳಿದಾಗ ಧನ್ಯತೆಯ ಭಾವಮೂಡಿ ಭಾವುಕಳಾಗಿದ್ದೆ . ಇದೆಲ್ಲವನ್ನೂ ನಿನ್ನೆಯ ಭಾಷಣದಲ್ಲಿ ಹೇಳಬೇಕೆಂದರೆ ಸಮಯಾಭಾವ ವಿದ್ದುದರಿಂದ ಬೇರೆ dimension ಹೇಳಿದ್ದಾಯಿತು . ಏಕೊ ಏನೊ ಮನಸ್ಸು ನಿನ್ನೆಯಿಂದ ಮನಸ್ಸು ಆಕೆಯನ್ನು ಬಹುವಾಗಿ ನೆನೆಪಿಸಿತು .

Wednesday 13 March 2013

ಚಟ್ನಿ ಪುರಾಣ ನ್ಯಾಷನಲ್ ಕಾಲೇಜು ಅಧ್ಯಾಪಕರಿಗಾಗಿ ನಡೆಸಿದ ಆಶುಭಾಷಣ ಸ್ಪರ್ದೆಯಲ್ಲಿ ಪ್ರಥಮ ಬಹುಮಾನ ಪಡೆದ ಭಾಷಣ



ZÀnß ¥ÀÄgÁt - ºÀgÀmÉ

ªÉÆ£Éß EzÀÝQÌzÀÝAvÉ £ÀªÀÄä AiÀÄdªÀiÁ£À ¸ÁºÉçÄæ £Á®ÄÌ d£À CwyUÀ¼À£ÀÄß PÀgÉvÀAzÀÄ JA¢£ÀAvÉ Hl gÉrvÁ£É ? JAzÁUÀ £À£ÀߣÀÄß PÁ¥ÁrzÀÄÝ £À£Àß ±ÉÊvÁåUÁgÀ (vÀAUÀ¼ÀÄ ¥ÉnÖUÉ!!) zÀ°èzÀÝ F ZÀnßUÀ¼ÉÃ! ©¹©¹AiÀiÁzÀ  ºÀvÁÛgÀÄ ZÀ¥Áw ºÁUÀÆ C£Àß ªÀiÁrzÀ £ÀAvÀgÀ ¥ÉnÖUɬÄAzÀ MAzÉÆAzÁV ºÉÆgÀ §AzÀ ºÀ¹-ºÀ¹ ZÀnßUÀ¼ÀÄ CªÀÄä - vÁAiÉÄà £Á«zÉÝÃªÉ ºÉzÀgÀ¨ÉÃqÀ JAzÀÄ CtQ¹ zsÉÊAiÀÄð ºÉýzÀªÀÅ. EAw¥Àà F ZÀnßUÀ¼À ¥ÀÄgÁtªÀ£ÀÄß ¸Àé®à w½AiÉÆÃt §¤ß.

ZÀnßUÀ¼À£ÀÄß ¸ÀÆÜ®ªÁV JgÀqÀÄ UÀÄA¥ÀÄUÀ¼ÁV «AUÀr¸À§ºÀÄzÀÄ. CzÉAzÀgÉ ºÀ¹ ZÀnß ªÀÄvÀÄÛ Mt ZÀnß. ºÀ¹ JAzÀgÉ ¤ÃgÀÄ ¸ÉÃjgÀĪÀÅzÀÄ CxÀªÁ ¤Ãj£ÀA±À G¼ÀîzÀÄÝ. Mt ZÀnß JAzÀgÉ ««zsÀ ¥ÀÄrUÀ¼À ZÀnßUÀ¼ÀÄ. F ºÀ¹ ªÀÄvÀÄÛ Mt ZÀnßUÀ¼À°è £ÀÆgÁgÀÄ §UÉ.

ºÀ¹ ZÀnßAiÀÄ CAvÀgÁ¼ÀªÀ£Éßà ¸Àé®à ºÉÆPÀÄÌ£ÉÆÃrzÀgÉ, vÉAV£ÀPÁ¬Ä ZÀnßAiÀÄzÉà MAzÀÄ ¸ÁªÀiÁædåªÁzÀgÉ, vÀgÀPÁjUÀ¼À ZÀnßUÀ¼ÀÄ £ÁªÉãÀÆ PÀrªÉĬĮè J£ÀÄßvÀÛªÁzÀgÀÆ, PÁ¼ÀÄ PÀrØUÀ¼ÀÄ £ÁªÀÇ E¢Ýë ¸Áé«Ä wAzÀÄ ªÀÄgÉvÀÄ©nÖgÁ J£ÀÄßvÀÛªÉ.

ªÉÆzÀ°UÉ zÀQët ¨sÁgÀvÀzÀ CzÀgÀ®Æè ªÉÄʸÀÆgÀÄ ¹ÃªÉÄAiÀÄ ¥ÀæzÉñÀªÀ£Éßà £ÉÆÃrzÀgÉ, E°è vÉAV£ÀPÁ¬Ä vÀ£Àß C¢ü¥ÀvÀå ¸ÁÞ¦¹zÉ JAzÀgÉ vÀ¥ÁàUÀ¯ÁgÀzÀÄ. vÉAV£ÀPÁ¬Ä ZÀnßAiÀÄ°è ªÀÄÄRåªÁV JgÀqÀÄ §UÉ ¹» ªÀÄvÀÄÛ SÁgÀ ZÀnß. SÁgÀ ZÀnßAiÀÄ°è ¥ÀÄ¢£À-PÁ¬Ä ZÀnß, ±ÀÄAp-PÁ¬ÄZÀnß, PÁ¬Ä-ªÉÄt¸ÀÄ ZÀnß ¨É¼ÀÄî½î ºÁQzÀÄÝ ºÁPÀzÉà EzÀÄÝ EvÁå¢ EvÁå¢. F J®è ZÀnßUÀ¼À°è vÉAUÀÄ MAzÀÄ ªÀiÁzÀåªÀÄ ªÀiÁvÀæ DAiÀiÁ¥ÀæzÉñÀzÀ d£ÀgÀ C©ügÀÄaUÉ C£ÀÄUÀÄtªÁV G¥ÀÄà, ºÀĽ, ¨É®è, ¸ÉÆ¥ÀÄàUÀ¼À£ÀÄß ¸ÉÃj¹zÁUÀ CzÀgÀzÉÝà DzÀ PÀA¥ÀÄ, EA¥À£ÀÄß ºÉÆAzÀÄvÀÛªÉ. C£ÀAvÀgÀ CzÀgÀ ªÉÄÃ¯É PÉÆvÀÛA¨j ¸ÉÆ¥ÀÄà, PÁågÉmï, UÉÆÃqÀA© ªÀÄÄAvÁzÀªÀÅUÀ¼À£ÀÄß ¸ÉÃj¹ C®APÁgÀ ªÀiÁrzÁUÀ ¨ÉqÀUÀÄ ©£ÁßtUÀ¼ÉÆA¢UÉ £ÀªÀÄä vÀmÉÖUÉ §A¢½AiÀÄÄvÀÛªÉ.
PÁ¬ÄZÀnßAiÀÄ ¸ÁªÀiÁædå «ºÀj¹zÀ £Á«ÃUÀ vÀgÀPÁj ZÀnßUÀ¼À ¸ÁªÀiÁædåzÀ¯ÉÆèMzÀÄ «ºÀAUÀªÀÄ ¸ÀÄvÀÄÛ ºÁPÉÆÃt. vÀgÀPÁ¬ÄUÀ¼À ºÀgÀªÀÅ «¸ÁÛgÀ zÉÆqÀØzÁzÀÝjAzÀ ¸ÁªÀiÁædåªÀÇ zÉÆqÀØzÉà DVzÉ. E°è ªÀiÁ«£ÀPÁ¬Ä, £É°èPÁ¬Ä, ºÀÄt¸ÉÃPÁ¬Ä, FgÀĽî, ¨É¼ÀÄî½î, ªÉÄt¹£ÀPÁ¬Ä, »ÃgÀPÁ¬Ä, §zÀ£ÉPÁ¬Ä, ¨ÉAqÉÃPÁ¬Ä . . . . J®èªÀÇ ZÀnßAiÀÄ ªÀiÁzÀåªÀÄUÀ¼ÉÃ. MAzÉÆAzÀÄ vÀgÀPÁj¬ÄAzÀ®Æ ºÀ®ªÀÅ §UÉAiÀÄ ZÀnß-UÉÆdÄÓUÀ¼À£ÀÄß vÀAiÀiÁj¸À§ºÀÄzÀÄ. EªÀÅUÀ¼À £É£ÉPÉAiÉÄà ¨ÁAiÀÄ°è ¤ÃgÀÆj¸ÀÄvÀÛzÉ.

E£ÀÄß vÀgÀPÁj ZÀnß vÀAiÀiÁjPÁ «zsÁ£ÀªÀ£ÀÄß ¸ÀÆÜ®ªÁV ¥ÀgÀ²Ã°¹zÁUÀ («eÁÕ¤AiÀÄAvÉ) PÉ® vÀgÀPÁjUÀ¼À£ÀÄß CzÀgÀ CAlÄ vÉUÉAiÀÄ®Ä ºÀÄjAiÀĨÉÃPÁUÀÄvÀÛzÉ. GzÁºÀgÀuÉUÉ ªÀiÁªÀÅ, ¨ÉAqÉ, FgÀĽî EvÁå¢. ªÀiÁªÀ£ÀÄß½zÀÄ EvÀgÉ ZÀnßUÀ¼ÀÄ ºÀĽAiÀÄ£ÀÄß ¨ÉÃqÀÄvÀÛªÉ. ºÀĽAiÀÄ eÉÆvÉUÉ SÁgÀ (ºÀ¹ªÉÄt¸ÀÄ CxÀªÁ MtªÉÄt¸ÀÄ), G¥ÀÄà, ¨É®è, PÀj¨ÉêÀÅ, fÃjUÉ ¸ÁªÀiÁ£Àå ¥ÀjPÀgÀUÀ¼ÁVgÀÄvÀÛªÉ. ªÀiÁzsÀåªÀÄzÉÆArUÉ (vÀgÀPÁj) ¸ÉÃgÀĪÀ ¥ÀjPÀgÀUÀ½UÀ£ÀÄUÀÄtªÁV PÀA¦gÀÄvÀÛzÉ. ¨É¼ÀÄî½î ¨ÉÃPÁzÀgÉ ºÁQPÉƼÀÀÄzÀÄ. CzÁUÀÆå PÉ®ªÀÅ ZÀnßUÀ½UÉ ¨É¼ÀÄî½î EgÀ¯ÉèÉÃPÀÄ. GzÁºÀgÀuÉUÉ zsÁgÀªÁqÀ ¹ÃªÉÄAiÀÄ zÁåªÀ£ÀÆgÀÄ-qÀ©â ªÉÄt¹£ÀPÁ¬ÄUÀ¼À CzÀgÀ®Æè ºÉÆ®¢AzÀ DUÀvÁ£Éà QvÀÄÛvÀAzÀ ºÀ¹ªÉÄt¹£ÀPÁ¬Ä ZÀnßAiÀÄ£ÀÄß ¨É¼ÀÄî½î, PÀj¨ÉêÀÅUÀ¼ÉÆA¢UÉ ºÀÄjzÀÄ £Á®ÄÌ PÁ¼ÀÄ ªÉÄAvÀå G¦à£ÉÆqÀ£É ©Ãd £ÀÄtÚUÁUÀĪÀAvÉ gÀÄ©â PÉÆ£ÉUÉ ¨É®è ¸ÉÃj¹ wgÀÄ« MgÀ¼ÀÄPÀ°è¤AzÀ vÉUÉzÀgÉ «Äj«Äj «ÄAZÀĪÀ F PÉA¥ÀÄ ¸ÀÄAzÀj PÉ®ªÀjUÉ ¨sÀAiÀĪÀ£ÀÄß ªÀÄvÉÛ PÉ®ªÀjUÉ ¸ËAzÀAiÀiÁð£ÀĨsÀÆwAiÀÄ£ÀÄß GAlĪÀiÁqÀÄvÁÛ¼É.

E£ÀÄß PÀj»Ar, ºÀÄt¸ÉvÉÆQÌ£ÀAvÀºÀ ªÀµÁð£ÀÄUÀlÖ¯Éà ¨Á¼ÀĪÀ ZÀnßUÀ¼ÀÄ £ÀUÀgÀ¥ÀæzÉñÀÀUÀ¼À°è §ºÀ¼À PÀrªÉÄAiÀiÁUÀÄwÛªÉ. 

£Á«£ÀÄß ºÀ¹ZÀnßAiÀÄ ªÀÄÆgÀ£Éà «¨sÁUÀPÉÌ §gÀĪÀÅzÁzÀgÉ EzÀÄ ¨ÉüÉPÁ¼ÀÄUÀ¼À£ÀÄß ªÀiÁzsÀåªÀĪÁUÀļÀî ZÀnßAiÀÄ «¨sÁUÀ. ºÉ¸ÀgÀÄPÁ¼ÀÄ, PÀqÀ¯É¨ÉüÉ, ºÉ¸ÀgÀĨÉüÉ, ªÉÄAvÀå, ±ÉÃAUÁ EvÁå¢ PÁ¼ÀÄUÀ¼À£ÀÄß £É£É¹ D PÁ¼ÀÄUÀ½UÉ ¸ÀÆPÀ۪ɤ¹zÀ ªÉÄïÉÆÃUÀgÀ ¸ÉÃj¹ gÀÄ©â ªÀiÁrzÀ ZÀnßUÀ¼ÀÄ ªÁgÀUÀlÖ¯Éà PÉqÀzÉ EgÀ§®èªÀÅ. «±ÉõÀªÁV ªÉÄAvÀå £É£É¹ MtªÉÄt¹£ÀPÁ¬Ä ºÁQ ªÀiÁrzÀ ZÀnßAiÀÄ£ÀÄß ¨ÁtAwAiÀÄjUÉ PÉÆqÀÄvÁÛgÉ. 

©¹ ZÀnßUÀ¼ÀÄ CxÁðvï ZÀnߥÀÄrUÀ¼ÀÄ

ºÀ¹ZÀnßAiÀÄ°ègÀĪÀAvÉ ©¹ZÀnßAiÀÄÆ vÀ£ÀßzÉà DzÀ «¸ÁÛgÀªÁzÀ ¸ÁªÀiÁædåªÀ£ÀÄß ºÉÆA¢zÉ. FUÀ F ¸ÁªÀiÁædåzÀ MAzÉÆAzÉà ¥ÁæAvÀåUÀ¼À£ÀÄß w½zÀÄPÉƼÉÆîÃt.

©¹ZÀnßUÀ¼À gÁdåzÀ°è MtPÉƧâjAiÉÄà gÁd. MtPÉƧâjAiÀÄ£ÀÄß vÀÄjzÀÄ PÉƧâj¥ÀÄrUÉ C£ÉÃPÀ jÃwAiÀÄ ¥ÀjPÀgÀUÀ¼À£ÀÄß ¸ÉÃj¹ ºÀ®ªÁgÀÄ §UÉAiÀÄ PÉƧâj ZÀnßUÀ¼À£ÀÄß ªÀiÁr qÀ©âUÀ¼À°è vÀÄA©qÀ§ºÀÄzÀÄ. PÉƧâjvÀÄjAiÀÄ G¥ÀÄà, SÁgÀzÀ¥ÀÄr, PÀj¨ÉêÀÅ, ¨É¼ÀÄî½î, ¨É®è, fÃjUÉAiÀÄ£ÀÄß ¸ÁªÀiÁ£ÀåªÁV ¨ÉÃqÀÄvÀÛzÉ. EzÀgÀ eÉÆvÉUÉ ¸Àé®à ºÀÄjUÀqÀ¯ÉAiÀÄ£ÀÄß ¸ÉÃj¹zÀgÉ ªÀÄvÉÆÛAzÀÄ jÃwAiÀÄ ZÀnßAiÀiÁUÀÄvÀÛzÉ. ºÀÄjUÀqÀ¯ÉAiÀÄ£ÀÄß «±ÉõÀªÁV G¥ÀAiÉÆÃV¹ ZÀnß ªÀiÁqÀÄvÁÛgÉ. E£ÀÄß CAiÀÄåAUÁgÀgÀ ªÀÄ£ÉAiÀÄ PÀqÀ¯É¨ÉüÉ, G¢Ý£À¨ÉüÉ, ºÉ¸ÀgÀĨÉüÉUÀ¼À£ÀÄß ºÀÄjzÀÄ EAUÀÄ ªÉÄïÉÆÃUÀgÀ ¸ÉÃj¹ ¥ÀÄrªÀiÁrzÀ ¨ÉÃ¼É ZÀnßAiÀÄ£ÀÄß CqÉÊ ªÀÄvÀÄÛ ªÉƸÀj£ÉÆA¢UÉ ¸Éë¹zÀgÉ DºÁ!

ªÉÄʸÀÆgÀĹêÉÄAiÀÄ £ÀAvÀgÀ ZÀnßUÉ §ºÀ¼À ¥Àæ¹zÀÞªÁzÀ ¥ÀæzÉñÀªÉAzÀgÉ zsÁgÀªÁqÀzÀ §AiÀĮĹêÉÄ ¥ÀæzÉñÀ. C°è gÉÆnÖ JuÉÚUÁ¬ÄAiÉÆA¢UÉ UÀÄgɼÀÄî (ºÀÄZÉѼÀÄî), CUÀ¹, ±ÉÃAUÁ, ¥ÀÄoÁt (ºÀÄjUÀqÀ¯É) ZÀnߥÀÄrU½®èzÉà Hl ¥ÀÆtðUÉƼÀÄîªÀÅ¢®è.

F ZÀmÉßUÀ¼ÀÄ ¨Á¬ÄgÀÄaAiÀÄ eÉÆvÉUÉ DgÉÆÃUÀåPÉÌ ªÀiË°PÀUÀÄtªÀ£ÀÄß vÀAzÀÄPÉÆqÀÄvÀÛªÉ. GzÁºÀgÀuÉUÉ ±ÉÃAUÁZÀnß JuÉÚPÁ½£ÀzÁVzÀÄÝ ¨Á¬ÄgÀÄaUÁzÀgÉ CUÀ¸É «±ÉõÀªÁV gÀPÀÛzÉÆvÀÛqÀ ºÁUÀÆ ºÀÈzÀAiÀÄ ¸ÀA§A¢üà PÁ¬Ä¯ÉUÀ½UÉ gÁªÀĨÁt. E£ÀÄß UÀÄgɽî£À°ègÀĪÀ ¸ÀvÀÄ CA±À zÉúÀPÉÌ CvÀåUÀvÀå.

ZÀnß ¸ÁªÀiÁædåªÀ£ÀÄß ¸ÀÆPÀëöäªÁV UÀªÀĤ¹zÁUÀ ºÀ¹ZÀnß EgÀ°, ©¹ZÀnß EgÀ° C°è ªÀÄÄRåªÁV MAzÀÄ ªÀiÁzsÀåªÀÄ EgÀÄvÀÛzÉ. CzÀPÉÌ ¸ÉÃgÀĪÀ «±ÉõÀ ¥ÀjPÀgÀUÀ½AzÁV CzÀPÉÌ §tÚ-gÀÄa-±ÀQÛ-ªÁ¸À£ÉAiÀÄÄAmÁV ZÀnßAiÀÄ PÀA¥ÀÄ-EA¥À£ÀÄß ºÉaѸÀÄvÀÛzÉ. MAzÉà ªÀiÁzsÀåªÀÄzÀ (GzÁºÀgÀuÉUÉ vÉAV£ÀPÁ¬Ä), ««zsÀ ZÀnßUÀ¼ÀÄ £ÁªÀĪÉÇAzÉà (PÁ¬ÄZÀnß) DzÀgÀÆ ºÀ®ªÀÅ ¨sÁªÀUÀ¼À£ÀÄß GAlĪÀiÁqÀÄvÀÛzÉ. 

MmÁÖgÉAiÀiÁV F ZÀnßUÀ¼ÀÄ £ÀªÀÄä fºÉéAiÀÄ°è ZÀÄgÀÄPï J£ÀÄߪÀ gÀ¸Á£ÀĨsÀÆwAiÀÄ£ÀÄß ºÀÄnÖ¹ CzÀgÀ°è PÀgÀV £ÀªÀÄä GzÀgÀªÀ£ÀÄß ¸ÉÃj gÀPÀÛzÉƼÀUÉÆAzÁV £ÀªÀÄä CtÄ-CtĪÀ£ÀÆß ¸ÉÃj ªÀÄ£À¹ì£À°è ¸ÀAvÉÆõÀ-ZÀÄgÀÄPÀÄvÀ£À-GvÁìºÀUÀ¼À£ÀÄß ªÀÄÆr¸À§®è ¸ÁªÀÄxÀåð«gÀĪÀ ªÀĺÁ£ï ±ÀQÛ±Á°UÀ¼ÁVªÉ. EzÀPÁÌV ZÀnß ªÀĺÁ±ÀAiÀÄgÀÄUÀ¼Éà ¤ªÀÄVzÉÆà ºÁåmïì D¥sï JAzÀÄ ºÉüÀÄvÁÛ ºÉƸÀ Cwy §AzÀAwzÉ ¨ÁV®Ä vÉUÉAiÀÄ®Ä vÉgÀ¼ÀÄvÉÛãÉ.

Honey - Jenahani



Honey - eÉãÀºÀ¤
EzÉÃPÉ Honey eÉãÀºÀ¤AiÀiÁVzÉ?
MAzÀÄ ºÀ¤ eÉãÀÄ vÀAiÀiÁgÁUÀ®Ä ¸Á«gÁgÀÄ ¥ÀĵÀàUÀ½AzÀ »ÃjzÀ ªÀÄPÀgÀAzÀ ¨ÉÃPÁUÀÄvÀÛzÉ. ºÁUÉAiÉÄà MAzÀÄ GvÀÛªÀÄ ¯ÉÃR£À vÀAiÀiÁgÁUÀ®Ä C£ÉÃPÀ ¥ÀgÁªÀıÀð£ÀUÀ¼À ªÀÄÄSÁAvÀgÀ ¸ÀAAiÉÆÃf¹ ¸ÀÈf¸À¨ÉÃPÁUÀÄvÀÛzÉ. DzÀÝjAzÀ EµÀÖ¥ÀlÄÖ ªÀÄvÀÄÛ PÀµÀÖ¥ÀlÄÖ §gÉ¢gÀĪÀ ¯ÉÃR£ÀUÀ¼À ¸ÀAUÀæºÀPÉÌ “eÉãÀºÀ¤” JAzÀÄ PÀgÉ¢zÉÝãÉ. F ºÀ¤UÀ¼ÀÄ ¤ªÀÄUÀÆ ¹»AiÀiÁzÀ°è §gÉzÀzÀÄÝ vÀ®Ä¦zÉ JAzÀÄPÉƼÀÄîvÉÛãÉ. §zÀ°UÉ PÀ»AiÀiÁzÀ°è ¸ÀÆPÀÛªÁV w½¹zÀgÉ ¹»AiÀiÁV¸ÀĪÀ ªÀÄgÀÄ¥ÀæAiÀÄvÀß ªÀiÁqÉÆÃt.