ಹಲವಾರು ದಿನಗಳಿಂದ ಕಾರಣಾಂತರಗಳಿಂದ ವಿಜ್ಞಾನ ಸಂವಹನೆಗಾಗಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯವರು ನೀಡುವ ರಾಷ್ಟ್ರ ಪ್ರಶಸ್ತಿ ಪಡೆದಿರುವ ಈ ಮೂವರನ್ನು(ಒಟ್ಟು ಎಂಟು ಜನ ಇದ್ದಾರೆ )
ಸಂದರ್ಶಿಸುವ ಅಫೀಷಿಯಲ್ ಕೆಲಸ ಬಾಕಿ ಉಳಿದುಬಿಟ್ಟಿತ್ತು . ಮೂವರ ಅಪಾಯಿಂಟ್ ಮೆಂಟ್
ಅನ್ನು ಸಿನ್ಕ್ರೋನೈಸ್ ಮಾಡಿ ಒಂದೇ ದಿನದಲ್ಲಿ ಹ್ಯಾಟ್ರಿಕ್ ಸಾಧಿಸಿದ್ದು ಒಂದು ಸಾಧನೆಯೇ
ಸೈ .
ಈ ಮೂವರು ಹಿರಿಯರ ಮತ್ತು ಅವರ ಡಾಕ್ಟರುಗಳ ಅಪಾಯಿಂಟ್ಮೆಂಟ್ ಅನ್ನು ಅನುಸರಿಸಿ ನಿನ್ನೆಗೆ ಸಮಯ ಹೊಂದಿಕೆಯಾಯಿತು (25-10-2003).
ಭಟ್ಟರು (AKB) 24-10-2013 ರರ ಸಂಜೆ ಫೋನುಮಾಡಿ ಕಮಲಾ ಶನಿವಾರ (26-10-2013) ನನಗೆ ಸ್ವಲ್ಪ
ತೊಂದರೆಯಿದೆ ಶುಕ್ರವಾರವೇ ಬಂದುಬಿಡು ಉಳಿದ ಇಬ್ಬರನ್ನು ಒಪ್ಪಿಸುವುದು ನನ್ನ ಕೆಲಸ ಎಂದಾಗ
, ನನ್ನ ಕೆಲಸ ಸುಲಭವಾಯಿತು ಎಂದುಕೊಂಡು ಮನೆಕಡೆಗೆ ಎಲ್ಲ ವ್ಯವಸ್ಥೆಮಾಡಿ (ದೋಸೆಹಿಟ್ಟು,ಪಲ್ಯ , ಸಾರು ಇತ್ಯಾದಿ ) ಮೈಸೂರಿನ ಬಸ್ಸು ಹತ್ತಿ ಶುಕ್ರವಾರ ಅಲ್ಲಿದ್ದೆ.
ರಾಯರು, ಭಟ್ಟರು ಮತ್ತು ಶ್ರೀಮತಿ ಇವರುಗಳು ಬರೆದ ವಿಜ್ಞಾನ ಸಾಹಿತ್ಯ ಓದುತ್ತಾ ಬೆಳೆದಿದ್ದ ನನಗೆ ಇದೊಂದು ಸುವರ್ಣ ಅವಕಾಶವಾಗಿತ್ತು .
ಜೆ ಎಲ್ ಲಕ್ಷ್ಮಣ ರಾವ್ |
ಕನ್ನಡದಲ್ಲಿ
ವಿಜ್ಞಾನ ಸಂವಹನೆ ಯಾವ ಸನ್ನಿವೇಶದಲ್ಲಿ ಪ್ರಾರಂಭವಾಯಿತು ? ಆರಂಭದ ದಿನಗಳ
ಕಷ್ಟನಷ್ಟಗಳು ಏನು ? ಕನ್ನಡದಲ್ಲಿ ವಿಜ್ಞಾನ ಪ್ರಸಾರದ ಸಾಂಸ್ಥಿಕರಣವಾದ ಬಗೆ ಇತ್ಯಾದಿ
ಇತ್ಯಾದಿ ಕೇಳುತ್ತಾ ಹೋದಂತೆ ನನಗೆ ಬೇಕು ಬೇಕಾದ ಅನೇಕ ವಸ್ತುನಿಷ್ಠ ವಿಷಯಗಳು
ಸ್ಪಷ್ಟವಾಗಿ ಮೂಲ ಪುರುಷರಿಂದ ತಿಳಿಯುತ್ತಾ ಹೋಯಿತು .
ಆದರೆ ಸಂದರ್ಶನ ಮಾಡುವಾಗ ಎಚ್ಚರಿಕೆಯಿಂದ ಚರ್ಚೆಯನ್ನು ಟ್ರಾಕ್ ಮೇಲೆ ಇಡದಿದ್ದರೆ ಸಂದರ್ಶಿಸುವವರಿಗೆ ಅಷ್ಟರಮಟ್ಟಿಗೆ ಲಾಸ್ ಎಂದೇ ಹೇಳಬಹುದು .
ನನ್ನ ಉಪನ್ಯಾಸಕ ವೃತ್ತಿ , ನಿರೂಪಕಿಯ ಪ್ರವೃತ್ತಿ , ಬರವಣಿಗೆಯ ಒಳತುಡಿತ ಇವೆಲ್ಲವೂ
ಸೇರಿ ನಾನು ನಡೆಸಿದ ಮೊಟ್ಟ ಮೊದಲ "ಸರಣಿ ಸಂದರ್ಶನ"ದಲ್ಲಿ ಪರವಾಗಿಲ್ಲ ಎನಿಸಬಹುದಾಷ್ಟು
ವಿಷಯ ಸಂಗ್ರಹಣೆ ಮತ್ತು ತೃಪ್ತಿ ಪಡೆದಿದ್ದೇನೆ .
ಶ್ರೀಮತಿ ಹರಿಪ್ರಸಾದ್ |
ಅಡ್ಯನಡ್ಕ ಕೃಷ್ಣಭಟ್ |
ಇನ್ನು ಈ
ಮೂವರ ವಿಷಯದಲ್ಲೂ ಸಮಾನವಾಗಿ ಕಂಡ ಅಂಶವೆಂದರೆ ಜೀವನದಲ್ಲಿ ತಮಗೆದುರಾದ ಅನೇಕ ವೈಯುಕ್ತಿಕ
ಏರುಪೇರುಗಳ ನಡುವೆಯೂ, ಕನ್ನಡದ ಕಂದಮ್ಮಗಳಿಗೆ , ಕನ್ನಡಿಗರಿಗೆ ವಿಜ್ಞಾನ
ಸಾಹಿತ್ಯವನ್ನು ಒದಗಿಸಬೇಕೆಂಬ ಇವರುಗಳ ಕಳಕಳಿ ಮತ್ತು ಬದ್ದತೆ ಅನನ್ಯವಾದದ್ದು . ಇಂತಹ
ಕೆಲಸಕ್ಕೆ ರಾಷ್ಟ್ರಪ್ರಶಸ್ತಿ ನೀಡಿರುವುದು ನಿಜವಾದರೂ , ಅವರು ಇದನ್ನೆಂದೂ
ಕನಸಿನಲ್ಲಿಯೂ ಬಯಸಿ ಕೆಲಸ ಮಾಡಿದವರಲ್ಲ ಎಂಬುದೂ ಸಹ ಅಷ್ಟೇ ನಿಜವಾದುದು .
ಹಲವುಬಾರಿ ಕ್ಯಾಮೆರಾ ಮುಂದೆ ಸ್ಟೈಲ್ ಆಗಿ ಕುಳಿತು ಸಂದರ್ಶನ ನೀಡಿದ್ದ ನನಗೆ ,ಕೊನೆಗೆ ಅನ್ನಿಸಿದ್ದು ಸಂದರ್ಶಿಸುವುದು ಒಂದು ಕುಶಲಕಲೆ ಎಂದು .