Tuesday 6 January 2015

ಮಾತೃಭಾಷೆಯಲ್ಲಿ ಶಿಕ್ಷಣ ಅಗತ್ಯ ಎಂದು ಭಾಷಣ ಮಾಡಿ ಬಹುಮಾನಗಿಟ್ಟಿಸಿದ್ದು .

ಈಗ್ಗೆ ಮೂವತ್ತೆರಡು ವರುಷಗಳ ಹಿಂದೆ 1982ರ ಒಂದು ದಿನ (33) ಅಂತರಶಾಲಾ ಚರ್ಚಾಸ್ಪರ್ದೆ ಏರ್ಪಟ್ಟಾಗ ನಮ್ಮ ಶಾಲೆಯಿಂದ ನನ್ನನ್ನು ಅಭ್ಯರ್ಥಿಯನ್ನಾಗಿ ಆರಿಸಿದ್ದರು (ಹಾಳೂರಿಗೆ ಉಳಿದವ ........)!!!. ಸ್ಪರ್ದೆಗೆ ಒಂದೇ ದಿನ ಬಾಕಿಯಿದ್ದಾಗ, ನಮ್ಮಪ್ಪನಿಗೆ ವಿಷಯ ತಿಳಿಸಿ ಪುಸ್ತಕ ಬೇಕೆಂದು ಕೇಳಿದೆ . ನಾನು ಹೇಳಿದ್ದನ್ನು ಕೇಳಿಸಿಕೊಂಡ ಅವರು ತಮ್ಮ ಲೈಬ್ರರಿಯ ಶೆಲ್ಫಿನ ಕಡೆಗೆ ಕೈ ತೋರಿಸಿ ಅಲ್ಲಿ ಸಣ್ಣ ಪುಸ್ತಕವಿರುವುದಾಗಿ ಹೇಳಿ ಓದಿಕೊಂಡು ಹೋಗುವಂತೆ ಹೇಳಿದರು . ಅಬ್ಬಾ!!!!!!! ಅದೊಂದು ಅದ್ಭುತವಾದ ರೆಫರೆನ್ಸ್ ಆಗಿತ್ತು , ಯಾರುಬರೆದದ್ದೆಂದು ನನಗೀಗ ನೆನಪಿಲ್ಲ , ಆದರೆ ಬೀ ಎಮ್ ಶ್ರೀ ಅವರ "ಮೊದಲ ತಾಯ ಹಾಲ ಕುಡಿದು ......."ಕವನದಿಂದ ಪ್ರಾರಂಭವಾಗಿ ಮಾತೃಭಾಷೆಯಲ್ಲಿ ಶಿಕ್ಷಣ ಪ್ರಾಮುಖ್ಯತೆಯ ಎಲ್ಲ ಮಗ್ಗುಲುಗಳನ್ನು ವಿಶ್ಲೇಷಣೆ ಮಾಡಿತ್ತು . ಅಂದು ನನಗೆ ಅದಾವುದೂ ಪೂರ್ಣ ಪ್ರಮಾಣದಲ್ಲಿ ಅರ್ಥವಾಗಿರಲಿಲ್ಲ ಎಂದು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುತ್ತೇನೆ . ಆದರೆ ನನ್ನ ಭಾಷಣ ಕೇಳಿದ ಜಡ್ಜುಗಳು ಬೆಕ್ಕಸ ಬೆರಗಾಗಿ ಬಿಟ್ಟಿದ್ದರು . ನನಗೆ ಪ್ರಥಮ ಬಹುಮಾನಕ್ಕೂ ಮಿಗಿಲಾದ "ವಿಶೇಷ ಬಹುಮಾನವನ್ನು" ಸೃಷ್ಟಿಸಿ ನೀಡಿದ್ದರು . ಇಂದು ಈ ಫೋಟೋ ನನ್ನ ಕೈಗೆ ಸಿಕ್ಕಾಗ ಅಂದು ನನಗಾದ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳೋಣ ಎನ್ನಿಸಿತು .