Saturday 14 March 2015

ಎಲ್ಲರನ್ನೂ ಹುರಿದುಂಬಿಸುವುದಷ್ಟೇ ಸಂಯೋಜಕಿಯ ಕೆಲಸ.


ನ್ಯಾಷನಲ್ ಕಾಲೇಜಿನಲ್ಲಿ ಸುಮಾರು ೨೦ ವರ್ಷಗಳ ನಂತರ ಮಾರ್ಚ್ ೬ ಮತ್ತು ೭ನೇ ತಾರೀಖು (೨೦೧೫) ವಿಜ್ಞಾನ ವಸ್ತುಪ್ರದರ್ಶನ ಆಯೋಜನೆಗೊಂಡು ಯಶಸ್ವಿಯಾದದ್ದು ಅತ್ಯಂತ ಸಂತೋಷದ ವಿಚಾರ . ಈ ಯಶಸ್ಸಿಗೆ ಪದವಿ ಕಾಲೇಜು , ಪದವಿ ಪೂರ್ವ ಕಾಲೇಜು , ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಯ  ಪ್ರಾಂಶುಪಾಲರುಗಳು ,ಅಧ್ಯಾಪಕರು ಮತ್ತು ವಿದ್ಯಾರ್ಥಿ ವೃಂದ ಒಟ್ಟಾಗಿ ದುಡಿದದ್ದು ಕಾರಣ . ವಸ್ತುಪ್ರದರ್ಶನ ಮತ್ತು ಉತ್ಸವ ಒಂದು ನಿಮಿತ್ತ ಮಾತ್ರ ಕಾರಣವಾಗಿ , ಸುಮಾರು ೧೦೦ಕ್ಕೂ ಹೆಚ್ಚು PPT ಗಳು , ೧೦೦ಕ್ಕೂ ಹೆಚ್ಛು ವಿಜ್ಞಾನ ಮಾದರಿಗಳು ೨೦ಕ್ಕೂ ಹೆಚ್ಚು ವಿವಿಧ ವಿಷಯಗಳ ಮೇಲೆ ಭಿತ್ತಿ ಚಿತ್ರಗಳು ಇತ್ಯಾದಿ ಇತ್ಯಾದಿ ತಯಾರಾಗಿ ಸ್ಪರ್ಧೆಯಲ್ಲಿ ಪಾಲ್ಗೊಂಡು  ಹಲವಾರು ವಿದ್ಯಾರ್ಥಿಗಳು ಬಹುಮಾನ ಪಡೆದದ್ದು ಸಂತಸದ ವಿಷಯ . ಒಟ್ಟಾರೆಯಾಗಿ ಎರಡು ತಿಂಗಳುಗಳ ಕಾಲೇಜಿನ ವಾತಾವರಣವನ್ನು ವಿಜ್ಞಾನಮಯಗೊಳಿಸಿದ ಸಾರ್ಥಕ ಭಾವ ಸಂಯೋಜಕಿಯಾಗಿ ಕೆಲಸ ಮಾಡಿದ ನನ್ನದಾಗಿದೆ .ನಮ್ಮೊಂದಿಗೆ ಸಹಕರಿಸಿದ ,
ಜವಾಹರ್ಲಾಲ್ ನೆಹರು ತಾರಾಲಯ , ಬೆಂಗಳೂರು ಆಸ್ಟ್ರೋನೊಮಿಕಲ್ ಸೊಸೈಟಿ , ನಿಮ್ಹಾನ್ಸ್ ಸಂಸ್ಥೆಯವರಿಗೂ ಧನ್ಯವಾದಗಳು 
 ಸಂಸ್ಥೆಯ ಆಡಳಿತವರ್ಗ ಮತ್ತು ಇತರೆ ಎಲ್ಲರನ್ನೂ ಸಂಭಾಳಿಸುವುದು ಸುಲಭವಲ್ಲದಿದ್ದರೂ , ಕಾರ್ಯ ಯಶಸ್ವಿಯಾದಾಗ ಸಿಗುವ  ಸಾರ್ಥಕ ಭಾವಕ್ಕೆ ಸಂಭಾವನೆಯಿಂದ ಬೆಲೆಕಟ್ಟಲಾಗದು ಎಂದಷ್ಟೇ ಹೇಳಬಲ್ಲೆ . 












Tuesday 6 January 2015

ಮಾತೃಭಾಷೆಯಲ್ಲಿ ಶಿಕ್ಷಣ ಅಗತ್ಯ ಎಂದು ಭಾಷಣ ಮಾಡಿ ಬಹುಮಾನಗಿಟ್ಟಿಸಿದ್ದು .

ಈಗ್ಗೆ ಮೂವತ್ತೆರಡು ವರುಷಗಳ ಹಿಂದೆ 1982ರ ಒಂದು ದಿನ (33) ಅಂತರಶಾಲಾ ಚರ್ಚಾಸ್ಪರ್ದೆ ಏರ್ಪಟ್ಟಾಗ ನಮ್ಮ ಶಾಲೆಯಿಂದ ನನ್ನನ್ನು ಅಭ್ಯರ್ಥಿಯನ್ನಾಗಿ ಆರಿಸಿದ್ದರು (ಹಾಳೂರಿಗೆ ಉಳಿದವ ........)!!!. ಸ್ಪರ್ದೆಗೆ ಒಂದೇ ದಿನ ಬಾಕಿಯಿದ್ದಾಗ, ನಮ್ಮಪ್ಪನಿಗೆ ವಿಷಯ ತಿಳಿಸಿ ಪುಸ್ತಕ ಬೇಕೆಂದು ಕೇಳಿದೆ . ನಾನು ಹೇಳಿದ್ದನ್ನು ಕೇಳಿಸಿಕೊಂಡ ಅವರು ತಮ್ಮ ಲೈಬ್ರರಿಯ ಶೆಲ್ಫಿನ ಕಡೆಗೆ ಕೈ ತೋರಿಸಿ ಅಲ್ಲಿ ಸಣ್ಣ ಪುಸ್ತಕವಿರುವುದಾಗಿ ಹೇಳಿ ಓದಿಕೊಂಡು ಹೋಗುವಂತೆ ಹೇಳಿದರು . ಅಬ್ಬಾ!!!!!!! ಅದೊಂದು ಅದ್ಭುತವಾದ ರೆಫರೆನ್ಸ್ ಆಗಿತ್ತು , ಯಾರುಬರೆದದ್ದೆಂದು ನನಗೀಗ ನೆನಪಿಲ್ಲ , ಆದರೆ ಬೀ ಎಮ್ ಶ್ರೀ ಅವರ "ಮೊದಲ ತಾಯ ಹಾಲ ಕುಡಿದು ......."ಕವನದಿಂದ ಪ್ರಾರಂಭವಾಗಿ ಮಾತೃಭಾಷೆಯಲ್ಲಿ ಶಿಕ್ಷಣ ಪ್ರಾಮುಖ್ಯತೆಯ ಎಲ್ಲ ಮಗ್ಗುಲುಗಳನ್ನು ವಿಶ್ಲೇಷಣೆ ಮಾಡಿತ್ತು . ಅಂದು ನನಗೆ ಅದಾವುದೂ ಪೂರ್ಣ ಪ್ರಮಾಣದಲ್ಲಿ ಅರ್ಥವಾಗಿರಲಿಲ್ಲ ಎಂದು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುತ್ತೇನೆ . ಆದರೆ ನನ್ನ ಭಾಷಣ ಕೇಳಿದ ಜಡ್ಜುಗಳು ಬೆಕ್ಕಸ ಬೆರಗಾಗಿ ಬಿಟ್ಟಿದ್ದರು . ನನಗೆ ಪ್ರಥಮ ಬಹುಮಾನಕ್ಕೂ ಮಿಗಿಲಾದ "ವಿಶೇಷ ಬಹುಮಾನವನ್ನು" ಸೃಷ್ಟಿಸಿ ನೀಡಿದ್ದರು . ಇಂದು ಈ ಫೋಟೋ ನನ್ನ ಕೈಗೆ ಸಿಕ್ಕಾಗ ಅಂದು ನನಗಾದ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳೋಣ ಎನ್ನಿಸಿತು .