Saturday 8 June 2013

ಡಾ . ಎಚ್ . ನರಸಿಂಹಯ್ಯ - 93

1997- 2004
-----------------




ನಾನು ನ್ಯಾಷನಲ್ ಕಾಲೇಜಿಗೆ ಕೆಲಸಕ್ಕೆ ಸೇರಿದ್ದು 1997ರಲ್ಲಿ . ಅಲ್ಲಿಯವರೆಗೂ ನನಗೂ H N ಗೂ ಹೇಳುವಂತಾ ಸಂಪರ್ಕವೇನೂ ಇರಲಿಲ್ಲ . ಆದರೆ ಅದೇನೋ ಗೊತ್ತಿಲ್ಲ ಕೆಲಸಕ್ಕೆ ಸೇರಿದಾಕ್ಷಣದಿಂದ ಅವರಿಗೂ ನನಗೂ ಉಂಟಾದ ಸ್ನೇಹ ಮಾತ್ರ ಐತಿಹಾಸಿಕ ವಾದದ್ದು (ಕಾಲೇಜಿನ ಮಟ್ಟಿಗೆ).
ನನ್ನ ಅವರ ಆಲೋಚನಾ ಕ್ರಮಗಳು , ಕೆಲಸ ಮಾಡುವ ವಿಧಾನ ಇಬ್ಬರಿಗೂ ಮೆಚ್ಚುಗೆಯಾಗಿ ದ್ದು ಇದಕ್ಕೆ ಕಾರಣವಿರಬಹುದು . ಮುಂದೆ ಅನೇಕ ಕೆಲಸಗಲ್ಲಿ ಅವರೊಂದಿಗೆ ಕೈ ಜೋಡಿಸಿದ ನನಗೆ ಅವರ ಒಡನಾಟ ಒಂದು ಅಧ್ಬುತ ಜೀವನ ಪಾಠ .

ಆಸ್ಪತ್ರೆಯಲ್ಲಿ ಊಟಮಾಡಿಸಿ ಬಾಯಿತೊಳೆದು ಬರುತ್ತಿದ್ದದ್ದು ಸೇವೆಮಾಡಲು ಒಂದು ನನಗೆ ಸಿಕ್ಕಿದ್ದ ಒಂದು ಅವಕಾಶ . 




2004 ರ (ಸೆಪ್ಟೆಂಬರ್ -ಅಕ್ಟೋಬರ್?) ಒಂದುಸಂಜೆ
-----------------------------------------------------------

ಮೇಲೆ ತಿಳಿಸಿದ ಸಮಯದಲ್ಲಿ ನಾನು ನನ್ನ ಅಣ್ಣನ ಕುಟುಂಬದೊಂದಿಗೆ ಗೋವಾ ಪ್ರವಾಸದಲ್ಲಿದ್ದ ಸಮಯ ವದು . ಯಾವುದೇ ಊರಿನಲ್ಲಿದ್ದರೂ ರಾತ್ರಿ ಒಮ್ಮೆ H N ಗೆ ಫೋನು ಮಾಡಿ ಆರೋಗ್ಯ ವಿಚಾರಿಸುವುದು ನನ್ನ ನಿತ್ಯದ ವಾಡಿಕೆಯಾಗಿತ್ತು . ಅದರಂತೆ ಗೋವಾ ದಿಂದಲೇ ಫೋನು ಮಾಡಿದೆ . ಆಕ್ಷಣಕ್ಕೆ ಫೋನು ಎತ್ತಿದ H N ಕೂಡಲೇ " ಕಮಲಾ ಇವತ್ತು ಮೀಟಿಂಗ್ನಲ್ಲಿ(Society A G M ) ನಾನು ಬಿಟ್ಟು ಬಿಡುತ್ತೇನೆಂದು ಹೇಳಿಬಿಟ್ಟೆ ". ಎಂದರು . " ಆಯಿತು ಅದರಬಗ್ಗೆ ಆಮೇಲೆ ಮಾತಾಡೋಣ ಈಗ ನಿಮ್ಮ ಆರೋಗ್ಯ ಹೇಗಿದೆ ಎಂದೇ?"
"ಪರವಾಗಿಲ್ಲ". ಎಂದರು .
ಬೆಂಗಳೂರಿಗೆ ಬಂಡ ಕೂಡಲೇ ಅವರ ಕೊಠಡಿ ಗೆ ತೆರಳಿದಾಗ ಮತ್ತದೇ ಅಧಿಕಾರ ತ್ಯಜಿಸುವ ಮಾತು . ಆಗ ನಾನು "ಒಳ್ಳೆಯ ಕೆಲಸ ಮಾಡಿದಿರಿ ಸ್ವಾಮೀ , ಒಂದೆರಡು ವರ್ಷ ಮೊದಲೇ ಬಿದಬಾರದಿತ್ತೆ ?" ಎಂದಾಗ , ಈ ಉತ್ತರ ನಿರೀಕ್ಷಿಸಿರದಿದ್ದ H N ಆ ಕೂಡಲೇ " ಅಮ್ಮ ನಾನು ಅಧಿಕಾರದಲ್ಲಿದ್ದರೆ ನಿನಗೆನಮ್ಮ ಹೊಟ್ಟೆಕಿಚ್ಚು ?" ಎನ್ನ ಬೇಕೇ?. " ಹೌದು ಸರ್ , ನೀವು ಇನ್ನೊಂದೆರಡು ವರ್ಷ ಮೊದಲೇ ಬಿಟ್ಟಿದ್ದಾರೆ ಇನ್ನೆರಡು ವರ್ಷ ಹೆಚ್ಚಾಗಿ ಬದುಕುತ್ತೀರಿ ಅದಕ್ಕೇ ಹೇಳಿದೆ . ಎಷ್ಟು ವರ್ಷ ಬೇಕಾದರೂ ಇರಿ ನನಗೇನಾಗಬೇಕು ಎಂದೇ ".

"ಅಧಿಕಾರ ಬಿಟ್ಟ ಮೇಲೆ ಸಮಯ ಹೇಗೆ ಕಳೆಯುತ್ತೀರಿ ?" ಎಂದೆ .
"ಅಮ್ಮ ನಾನು ಎಷ್ಟೋ ವರ್ಷಗಳಿಂದ ಓದುವುದು ನಿಂತು ಹೋಗಿದೆ . ಓದುವುದು ಬೇಕಾದಷ್ಟಿದೆ ನೆಮ್ಮದಿಯಾಗಿ ಕುಳಿತು ಓದುತ್ತೆನೆ". ಎಂದರು .
ಅನಂತರದಲ್ಲಿ ಅಧಿಕಾರ ತ್ಯಜಿಸುವುದನ್ನು ರೆಕಾರ್ಡ್ ಮಾಡಿಸಿದ ಕಿಲಾಡಿ ತಾತ .
ಆದರೆ ಅಧ್ಯಕ್ಷರಾಗಿದ್ದಾಗಲೇ , ದೆಹಾಂತ್ಯವಾಗಿದ್ದು (31-1-2005) ಸಾವು ನಮ್ಮ ಕೈಯ್ಯಲ್ಲಿಲ್ಲ ಎಂಬುದನ್ನು ಸೂಚಿಸುತ್ತದೆ . 



ಸ್ಥೂಲ ಜೀವನ ಚಿತ್ರ
-----------------------
ನರಸಿಂಹಯ್ಯ ನವರಬಗ್ಗೆ ಇನ್ನೇನೂ ಉಳಿದಿಲ್ಲ ಎನ್ನುವಷ್ಟರ ಮಟ್ಟಿಗೆ ಅನೇಕರು ಬರೆದಿದ್ದಾರೆ .
ಆದರೆ ಆ ವ್ಯಕ್ತಿ ಒಂದು ವಿಶ್ವ ಕೋಶ , ಅಕ್ಷಯ ಪಾತ್ರೆ . ಬರೆದಷ್ಟು ಮೊಗೆದಷ್ಟು ವಿಷಯಗಳು ಸಿಕ್ಕುತ್ತಲೇ ಇರುತ್ತವೆ .

ಗೌರಿಬಿದನೂರಿನ ಹೊಸೂರು ಇಲ್ಲಿರುವ ಒಂದೂವರೆ ಚದರದ ಮನೆಯ ವಳಕಲ್ಲ ಪಕ್ಕದಲ್ಲಿ ಹುಟ್ಟಿದ್ದು .
ಎಂಟನೇ ತರಗತಿಗೆ ಶಾಲೆಗೇ ಸೇರಲು ಅಲ್ಲಿನದಲೇ ಕಾಲ್ನಡಿಗೆಯಲ್ಲಿ ಬೆಂಗಳೂರಿಗೆ ಬಂದದ್ದು ಅವರ ಜ್ಞಾನದಾಹ ಹಾಗೂ ಬದುಕು ಗೆಲ್ಲಬೇಕೆನ್ನುವ ಛಲವನ್ನು ಸೂಚಿಸುತ್ತದೆ .

9ನೇ ತರಗತಿಯಲ್ಲಿದ್ದಾಗ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗಾಂಧಿಜಿಯವರನ್ನು ಭೇಟಿ ಮಾಡಿದ್ದು , ಅವರ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಿದ್ದು ಅವರ ಆತ್ಮ ವಿಶ್ವಾಸವನ್ನು ಸೂಚಿಸುತ್ತದೆ .
ಕಾಲೇಜು ಓದುವಾಗ ಸ್ವಾತಂತ್ರ ಚಳುವಳಿಯಲ್ಲಿ ಧುಮುಕಿದರೂ , BSc ಕೊನೆ ವರ್ಷದಲ್ಲಿ ಎಲ್ಲವಿಷಯಗಳ ಪರೀಕ್ಷೆಯನ್ನು ಒಟ್ಟಿಗೆ ಬರೆದು ಪಾಸುಮಾದಿದ್ದು ಮತ್ತೊಮ್ಮೆ ಬದುಕು ಗೆಲ್ಲಲೇ ಬೇಕೆಂಬ ಛಲದ ಸಾಬೀತು ಮಾಡಿದರು . ಈ ಹಂತದಲ್ಲಿ ರಾಮಕೃಷ್ಣ ವಿದ್ಯಾರ್ಥಿ ಮಂದಿರದಲ್ಲಿ ಆಸರೆ ಪಡೆದಿದ್ದ ಅವರು ಆಧ್ಯಾತ್ಮದ ಕಡೆಗೆ ಒಲವು ಬೆಳೆಸಿಕೊಂಡಿದ್ದರು . ಮದುವೆಯಬಗ್ಗೆ ನಿರ್ಲಿಪ್ತರಾಗಿದ್ದರು .
MSc ಪಾಸು ಮಾಡಿ ಕೆಲಸಕ್ಕೆ ಸೇರಿದ್ದು ಜೀವನಕ್ಕೆ ಸ್ವಲ್ಪ ಆಸರೆಯಾಯಿತಾದರೂ , ಮತ್ತೊಮ್ಮೆ ಚಳುವಳಿಗೆ ಧುಮುಕಿದರು .

ನಂತರದ ಹಂತದಲ್ಲಿ ಮತ್ತೊಮ್ಮೆ ನ್ಯಾಷನಲ್ ಕಾಲೇಜಿಗೆ ಕೆಲಸಕ್ಕೆ ಸೇರಿದ ಅವರು ಕಾಲೇಜನ್ನು ಅತೀ ಕಡಿಮೆ ಪಲಿತಾಂಶ ದಿಂದ ರಾಂಕು (rank) ಪಡೆಯುವ ಕಾಲೇಜಾಗಿ ಪರಿವರ್ತಿಸಿದ್ದು ಅವರ ಶೈಕ್ಷಣಿಕ ಶಕ್ತಿ , ಆಡಳಿತಾತ್ಮಕ ಶಕ್ತಿ ,ಮುತ್ತ್ಸದ್ದಿತನ , ಮತ್ತು ದೂರದರ್ಶಿತ್ವವನ್ನು ಬಿಂಬಿಸುತ್ತದೆ .

ತನ್ನ 36ನೇ ವಯಸ್ಸಿನಲ್ಲಿ ಅಮೆರಿಕಾಗೆ ತೆರಳಿ ಓಹಿಯೋ ವಿಶ್ವವಿದ್ಯಾಲಯದಲ್ಲಿ ನ್ಯೂಕ್ಲಿಯಾರ್ ಫಿಸಿಕ್ಸ್ ವಿಷಯದಮೇಲೆ ಸಂಶೋಧನೆ ಮಾಡಿ PhD ಪಡೆದದ್ದು ಅವರರ ಎರಡನೇ ಹಂತದ ಸಾಧನೆಗೆ ನಾಂದಿ ಹಾಡಿತು .

ಅವರು ಅಮೆರಿಕೆಗೆ ತೆರಳುವಾಗ ಏರ್ಪೋರ್ಟ್ ನಲ್ಲಿ ಶಿಷ್ಯರಾದಿಯಾಗಿ ಜನಸಮೂಹ ಬೀಳ್ಕೊಟ್ಟದ್ದು , ಅಷ್ಟುಹೊತ್ತಿಗೆ ಅವರು ಸಂಪಾದಿಸಿದ್ದ "ಆಸ್ತಿ"ಯನ್ನು ಸೂಚಿಸುತ್ತ ದೆ .

ಅಮೇರಿಕೆಯಿಂದ ವಾಪಾಸಾಗುವ ಹೊತ್ತಿಗೆ ಅವರ ಮನೋಭಾವದಲ್ಲಿ ಸಾಕಷ್ಟು ಬದಲಾವಣೆ ಆಗಿತ್ತು .

ಕಾಲೇಜಿನಲ್ಲಿ ಹೆಣ್ಣುಮಕ್ಕಳಿಗೆ ಪ್ರವೇಶಾವಕಾಶ ಮತ್ತು ಬೆಂಗಳೂರು ವಿಜ್ಞಾನ ವೇದಿಕೆಯ ಸ್ಥಾಪನೆ .

ನಂತರದ ದಿನಗಳಲ್ಲಿ ಕಾಲೇಜು ಅದ್ಯಾಪಕರೊಬ್ಬರು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಆಯ್ಕೆಯಾಗಿದ್ದು ಇತಿಹಾಸ . ವಿ. ವಿ. ಯನ್ನು ನಗರದ ಮಧ್ಯಭಾಗದಿಂದ ಹೊರವಲಯಕ್ಕೆ ಸ್ಥಳಂತರ ಗೊಳಿಸಿ ಅದನ್ನು ಕ್ರಿಯಾಶೀಲವನ್ನಾಗಿಸಿದ್ದು ಇಂದಿಗೂ ನೆನಪಿಸಿಕೊಳ್ಳ ಬಹುದಾದ ಸಾಧನೆ .

ಸಾಯಿ ಭಾಭಾ ವಿರುದ್ದ ತಿರುಗಿಬಿದ್ದದ್ದು , ಒಂದು ಕುಂಬಳ ಕಾಯಿ ಕೊಡೆಂದು ಕೇಳಿದ್ದು ಮೂಡನಂಬಿಕೆ ಮತ್ತು ಸಮಾಜದ ಬಗೆಗಿನ ಹೋರಾಟದ ಒಂದು ಅಧ್ಯಾಯವಷ್ಟೇ .

ಹಳ್ಳಿಗಳಲ್ಲಿ ಕಾಲೇಜು ಸ್ಥಾಪನೆ , K R V P ಸ್ಥಾಪಿಸಿ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವದಿಕ್ಕಿನಲ್ಲಿ ಒಟ್ಟು ಕೊಟ್ಟದ್ದು, ಅವರ ಸಮಾಜ ಮುಖಿ ಚಿಂತನೆಗಳು .
ಇದೆಷ್ಟೇ ಅಲ್ಲದೆ ಸಮಾಜದ ಎಲ್ಲ ಕ್ಷೇತ್ರಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದರು . ರಾಜಕಾರಣಿಗಳೊಂದಿಗೆ ಸೂಜಿಗೆ ಮುತ್ತು ಕೊಟ್ಟಂತೆ ಸಂಭಂದ ಇಟ್ಟುಕೊಂಡಿದ್ದು ಅವರ ಮುತ್ಸದ್ದಿತನ ವನ್ನು ಸೂಚಿಸುತ್ತದೆ .
ಅವರ ಆಡಳಿತ ಶೈಲಿಯಂತೂ , ವಿಶಿಷ್ಟವಾದದ್ದು , IIM ನಲ್ಲಿ Dr. H N Stye of Administration ಎಂದು ಒಂದು ಪಾಠ ಸೇರಿಸಬಹುದು . ಸಣ್ಣ ಸಂಸ್ಥೆಗಳ ಆಡಳಿತಕ್ಕೆ ಮಾರ್ಗಸೂಚಿಯಾಗಬಲ್ಲುದು .
ನ್ಯಾಷನಲ್ ಎಜುಕೇಶನ್ ಸೊಸೈಟಿಯ ಅನಭಿಷಿಕ್ತ ದೊರೆಯಾಗಿ ಆಳಿದ್ದು, ಅಲ್ಲೇ ಕಾಲೇಜಿನ ಮೂಲೆಯಲ್ಲಿ ಹಾಸ್ಟೆಲ್ ಕೊಠಡಿಯಲ್ಲಿ ಜೀವಿಸಿದ್ದು ಅವರ ಜೀವನದ ದರ್ಶನವನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಸೂಚಿಸುತ್ತದೆ .
ಇನ್ನು ಪ್ರಶಸ್ತಿ ,ಗೌರವಗಳು ಈ ಲೇಖನದ ಮಿತಿಗೆ ಹೊರತಾಗಿವೆ ಬಿಡಿ .
ಅವರಿಗೆ ಬಂದ ಶಾಲುಗಳನ್ನು ತಮ್ಮ ಸುತ್ತ ಮುತ್ತಲಿನವರಿಗೆ ಕೊಟ್ಟು ಮಿಕ್ಕಿದ್ದನ್ನು , ಒಂದು ದಿನ ರಾತ್ರಿ ಪರಿಚಯಸ್ಥರ ಕೈಗೆ ಕೊಟ್ಟು ಫುಟ್ಪಾತ್ ನಲ್ಲಿ ಮಲಗಿರುವ ನಿರ್ಗತಿಕರಿಗೆ ಹೊದೆಸಿಬರಲು ಹೇಳಿದ್ದರು !!!!!!!!!!!

ಬರೆಯುತ್ತಾ ಹೋದರೆ ಲೇಖನ ಮುಗಿಯುವುದಿಲ್ಲ .

ಇಂದು ಅವರ ಜನ್ಮದಿನವಾಗಿದ್ದು ಅವರಂತಹ ನಾಯಕರುಗಳು ಸಮಾಜಕ್ಕೆ ಪ್ರಸ್ತುತ ಮತ್ತು ಬೇಕು ಎಂದು ಹೇಳುವುದು ತೋರಿಕೆಯ ಮಾತಲ್ಲ ಬದಲಿಗೆ ಅವರನ್ನು ಕಂಡು ಅವರ ಒಡನಾಡಿಗಳಾಗಿದ್ದ ನಮ್ಮ ಅನುಭವದ ಮಾತು .

No comments:

Post a Comment