Wednesday 29 May 2013

ನಮ್ಮಪ್ಪನ ಊರು ಹಾವೇರಿ ಜಿಲ್ಲೆಯ ಹರವಿ

ವರದಾ ನದಿ ದಂಡೆಯ ಮೇಲಿರುವ ಸಣ್ಣ ಹಳ್ಳಿ "ಹರವಿ". reference ಹೇಳುವುದಾದರೆ ಬಂಕಾಪುರದ ಪಕ್ಕದ ಹಳ್ಳಿ . ನಮ್ಮಪ್ಪ 1940 ರ ದಶಕದಲ್ಲೇ ಉದರನಿಮಿತ್ತ ಉದ್ಯೋಗವನ್ನರಸಿ ಊರು ಬಿಟ್ಟರು . transferable ಕೆಲಸದಲ್ಲಿದ್ದುದರಿಂದ ಊರೂರು ಸುತ್ತಿ ಕೊನೆಗೆ ಬೆಂಗಳೂರಿನಲ್ಲಿ ನೆಲೆನಿಂತರು .

ನಾನು 7ನೇ ತರಗತಿಯಲ್ಲಿದ್ದಾಗ ನಮ್ಮಮ್ಮನ ಜೊತೆ ಹೋಗಿ 15 ದಿನ ಇದ್ದದ್ದು ಬಿಟ್ಟರೆ ಅಂತರ ಇಷ್ಟು ಸುಧೀರ್ಘ ವಾಗಿ ಎಂದೂ ಇರಲಿಲ್ಲ . ಆದರೆ ವರ್ಷಕ್ಕೆ ಮೂರ್ನಾಲ್ಕು ಬಾರಿ Visiting Professor ಕೆಲಸ ಮಾಡಿಕೊಂಡಿದ್ದೇನೆ .


ಆದರೆ ಈಗ ಅಲ್ಲಿ ನದಿ ಒಣಗಿ ಹೋಗಿದೆ . ನಾನು ಚಿಕ್ಕವಳಿದ್ದಾಗ ಬೇಸಗೆಯಲ್ಲೂ ಸಣ್ಣಗೆ ಹರಿಯುತ್ತಿತ್ತು .
ದಿನವೂ ಬಟ್ಟೆ ಹೊಗೆಯುವವರ ಜೊತೆ ಹೋಗಿ ನೀರಲ್ಲಿ ಕಾಲಾಡಿಸಿಕೊಂಡು ಕುಳಿತುಕೊಳ್ಳುತ್ತಿದ್ದುದು ಹಸಿರಾಗಿರುವ ನೆನಪು .ಹಚ್ಹ ಹಸುರಿನ ಹೊಲಗಳು, ಅಲ್ಲಿನ ನವಿಲುಗಳು ಕಣ್ಣ ಮುಂದೆ ಬಂದಂತಾಗುತ್ತಿದೆ .
ಹೊಲದಿಂದಬರುವಾಗ ಶೇಂಗಾ ಕಿತ್ತು ತಂದು ಮನೆಯಲ್ಲಿ ಬೇಯಿಸಿ ತಿಂದದ್ದು ಎಲ್ಲಾ ನಿನ್ನೆ ಮೊನ್ನೆ ಆದಂತಿದೆ. .
ಪಕ್ಕದಲ್ಲಿ ವರದ - ಧರ್ಮ ನದಿ ಸೇರುವ ಕೂಡಲ ಇದೆ .ಇಲ್ಲಿ ನಾವು ಬೆಂಗಳೂರಿನಿಂದ ಬಂದಿದ್ದೇವೆಂದು ನಮ್ಮ ಜೊತೆಗೆ ಎಲ್ಲರೂ ಬಂದು ರೊಟ್ಟಿ ಗಂಟು, ಹಿಟ್ಟಿನ ಪಲ್ಯೆ , ಬೇಳೆ ಪಲ್ಯೆ , ಪಚಡಿ , ಇತ್ಯಾದಿಗಳನ್ನು ಕೂಡಿ ತಿಂದದದ್ದು ಇನ್ನು ಹಸಿರಾದ ನೆನಪು .

ಇದನ್ನು ನೆನಪು ಮಾಡಿಕೊಳ್ಳಲು ಕಾರಣ 27 -5-2013(ನಿನ್ನೆ) ಅಲ್ಲಿ , ನಮ್ಮಪ್ಪಾಜಿಯ ತಮ್ಮನ ಮಗ ಶಿವಲಿಂಗಪ್ಪನ ಮಗಳು ಗೀತಳ ಮದುವೆಗಾಗಿ ತೆರಳಿದ್ದೆವು . ಶಿವಲಿಂಗಪ್ಪ ಬೆಂಗಳೂರಿನಲ್ಲಿ ನಮ್ಮೆಲ್ಲರೊಂದಿಗೆ ಹೈಸ್ಕೂಲ್ ಓದಿದ್ದು . junior ಎರೆಸೀಮೆ ತಂಡಗಳೊಂದಿಗೆ senior ಎರೆಸೀಮೆ ಕುಟುಂಬದ ನಾವೆಲ್ಲರೂ ಸೇರಿದ್ದು ಬಹಳ ಸುಂದರ ಸಮ್ಮಿಲನವಾಗಿತ್ತು .

ಅಲ್ಲಿನ ಬತ್ತಿಹೋದ ಹೊಳೆ , ಹೊಲ ಎಲ್ಲವನ್ನು ನನ್ನ ಮಗಳ ಕೈ ಹಿಡಿದುಕೊಂಡು ತೋರಿಸಿಕೊಂಡು ಕಾಮೆಂಟರಿ ಹೇಳುತ್ತಾ ಸಾಗಿದ್ದು ನನ್ನಿಂದ ನನ್ನ ಮಗಳಿಗೊಂದು nostalgic ಪಾಠ , ಆಕೆ ಸುಮ್ಮನೆ ಬಂದದ್ದು ನನ್ನ ಪುಣ್ಯ .
Amma enough Amma shall we go back ಎಂದು ಹೇಳದ ರೀತಿಯಲ್ಲಿ ಕರೆದುಕೊಂಡು ಹೋಗಿದ್ದು 24 ವರ್ಷದ teaching experiansu!!!!!!!!!!!!.


No comments:

Post a Comment