Wednesday 27 February 2019

ರಾಜ್ಯಮಟ್ಟದ ಕನ್ನಡಲ್ಲಿ ವಿಜ್ಞಾನ ಭಾಷಣ ಸ್ಪರ್ಧೆಯ ಸಮಾರೋಪ ಸಮಾರಂಭ - ಮಂಗಳೂರು 15th Feb 2015

411 ಸರಕಾರಿ ಕಾಲೇಜುಗಳಿಗೂ ಸ್ಮಾರ್ಟ್ ಕ್ಲಾಸ್: ಶಂಕರಪ್ಪ

ವೈಜ್ಞಾನಿಕವಾಗಿ ವಿದ್ಯಾರ್ಥಿಗಳು ಸಮರ್ಥರಾಗುವ ಉದ್ದೇಶದಿಂದ ರಾಜ್ಯದ 411 ಸರಕಾರಿ ಕಾಲೇಜುಗಳಿಗೂ ಸ್ಮಾರ್ಟ್ ಕ್ಲಾಸ್‌ಗಳನ್ನು ವಿಸ್ತರಿಸುವ ಗುರಿಯಿದ್ದು, ಬಜೆಟ್‌ನಲ್ಲಿ ನೆರವು ನೀಡುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಕಾಲೇಜು ಶಿಕ್ಷೃಣ ಇಲಾಖೆ ನಿರ್ದೇಶಕ ಶಂಕರಪ್ಪ ಹೇಳಿದರು.

sarakari
ಮಂಗಳೂರು: ವೈಜ್ಞಾನಿಕವಾಗಿ ವಿದ್ಯಾರ್ಥಿಗಳು ಸಮರ್ಥರಾಗುವ ಉದ್ದೇಶದಿಂದ ರಾಜ್ಯದ 411 ಸರಕಾರಿ ಕಾಲೇಜುಗಳಿಗೂ ಸ್ಮಾರ್ಟ್ ಕ್ಲಾಸ್‌ಗಳನ್ನು ವಿಸ್ತರಿಸುವ ಗುರಿಯಿದ್ದು, ಬಜೆಟ್‌ನಲ್ಲಿ ನೆರವು ನೀಡುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಕಾಲೇಜು ಶಿಕ್ಷೃಣ ಇಲಾಖೆ ನಿರ್ದೇಶಕ ಶಂಕರಪ್ಪ ಹೇಳಿದರು.

ಕಂಕನಾಡಿಯ ಫಾತಿಮಾ ರಿಟ್ರೀಟ್ ಹೌಸ್ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಅಂತರಕಾಲೇಜು ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೊದಲ ಹಂತದಲ್ಲಿ 100 ಕಾಲೇಜುಗಳಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸಲು ಯೋಜನೆ ರೂಪಿಸಿದ್ದು, ಈ ಪೈಕಿ 80 ಕಾಲೇಜುಗಳಿಗೆ ಈಗಾಗಲೇ ಬೋಧನಾ ವೀಡಿಯೊಗಳನ್ನು ನೀಡಲಾಗಿದೆ. ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಉಪನ್ಯಾಸವನ್ನು ವೀಡಿಯೊ ಚಿತ್ರೀಕರಿಸಿ ಅದನ್ನು ಎಲ್ಲ ಕಾಲೇಜುಗಳಿಗೂ ನೀಡಲಾಗುವುದು. ಅನುದಾನಿತ ಕಾಲೇಜುಗಳಿಗೂ ಇದನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳಲ್ಲಿರುವ ಸಹಜ ಕುತೂಹಲವನ್ನು ಶಾಲೆಗಳು ಮೊಟಕುಗೊಳಿಸಬಾರದು. ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ ಮೂಡಿಸಬೇಕು. ಶಿಕ್ಷೃಣದಿಂದ ಸಾಮಾಜಿಕ ಪ್ರಜ್ಞೆ ಜಾಗೃತವಾಗಬೇಕು ಎಂದವರು ನುಡಿದರು.

ಕಾಲೇಜು ಶಿಕ್ಷೃಣ ಇಲಾಖೆ ಶೈಕ್ಷೃಣಿಕ ಸಂಯೋಜಕಿ ಡಾ.ವೈ.ಸಿ.ಕಮಲಾ ಮಾತನಾಡಿ, ವಿಜ್ಞಾನ ಮತ್ತು ಸಮಾಜ ಬೇರ್ಪಡಿಸಲಾಗದಷ್ಟು ಸಂಬಂಧ ಹೊಂದಿವೆ. ವಿಜ್ಞಾನವನ್ನು ಮಾತೃಭಾಷೆಯಲ್ಲಿ ತಲುಪಿಸುವ ಸಂವಹನಕಾರರಾಗಬೇಕು ಎಂದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿ ಮಂಡಳಿ ಸದಸ್ಯ ಎಚ್.ಆರ್. ಸ್ವಾಮಿ ಅಧ್ಯಕ್ಷೃತೆ ವಹಿಸಿದ್ದರು.

ಕಾರ್ಯಕಾರಿ ಮಂಡಳಿ ಸದಸ್ಯ ಆರ್.ನಾಗೇಶ್ ಅರಳಕುಪ್ಪೆ, ಕಾಲೇಜು ಶಿಕ್ಷೃಣ ಇಲಾಖೆ ಮಂಗಳೂರು ವಿಭಾಗದ ಜಂಟಿ ನಿರ್ದೇಶಕ ಬಿ.ಎ.ಪಾಟೀಲ, ಸೇಂಟ್ ಆಗ್ನೆಸ್ ಕಾಲೇಜು ಪ್ರಾಧ್ಯಾಪಕ ಡಾ.ಜಯಂತ್ ಎಚ್., ವಿಜ್ಞಾನ ಪರಿಷತ್‌ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷೃ ಕಡಮಜಲು ಸುಭಾಸ್ ರೈ, ಕಾರ್ಯದರ್ಶಿ ಅನಂತರಾಮ ಹೇರಳೆ, ಕೋಶಾಧಿಕಾರಿ ರೆನ್ನಿ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

No comments:

Post a Comment